ಡೀಸೆಲ್ ಬೆಲೆ ಹೆಚ್ಚಾಗಿದ್ದರೂ ಸದ್ಯ ಬಸ್ ಟಿಕೆಟ್ ದರದಲ್ಲಿ ಹೆಚ್ಚಳವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

0 min read

ಹೈಲೈಟ್ಸ್‌:

  • ಡೀಸೆಲ್ ಬೆಲೆ, ನಿರ್ವಹಣಾ ವೆಚ್ಚ ಜಾಸ್ತಿ ಆಗಿರುವುದರಿಂದ ಶೇಕಡಾ 40ರಷ್ಚು ಟಿಕೆಟ್ ದರ ಹೆಚ್ಚಿಸಬೇಕೆೆಂದು ಸಾರಿಗೆ ಸಂಸ್ಥೆಯಿಂದ ಪ್ರಸ್ತಾವನೆ
  • ಜೊತೆಗೆ ಜೂನ್ 15ರಂದು ಡೀಸೆಲ್ ಗೆ 3.50 ರೂಪಾಯಿ ಹೆಚ್ಚಾಗಿದ್ದರಿಂದ ಬಸ್ ಟಿಕೆಟ್ ಹೆಚ್ಚಳವಾಗಬಹುದೆಂದು ಊಹಿಸಲಾಗಿತ್ತು
  • ಡೀಸೆಲ್ ದರ ಹೆಚ್ಚಾಗಿದ್ದರೂ, ಬಸ್ ಟಿಕೆಟ್ ದರ ಹೆಚ್ಚು ಮಾಡಿ ಕೆಲ ವರ್ಷಗಳಾಗಿದ್ದರೂ ಈಗ ಹೆಚ್ಚು ಮಾಡುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಡೀಸೆಲ್ ದರ ಹೆಚ್ಚಾಗಿದ್ದರೂ ಸದ್ಯಕ್ಕೆ ಸಾರಿಗೆ ಸಂಸ್ಥೆ ಬಸ್ ಗಳ ಟಿಕೆಟ್ ದರ ಏರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಸ್ ಟಿಕೆಟ್ ದರ ಹೆಚ್ಛಳವಾಗಬಹುದೆಂಬ ಆತಂಕದಲ್ಲಿದ್ದ ಬಸ್ ಪ್ರಯಾಣಿಕರು ಸದ್ಯ ನಿರಾಳವಾಗಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿ, ಬಸ್ ದರ ಪರಿಷ್ಕರಣೆ ಮಾಡಿ ಬಹಳ ವರ್ಷಗಳಾಗಿದ್ದು ಈಗ ಡೀಸೆಲ್ ದರ ಹೆಚ್ಚಳವೂ ಆಗಿದೆ. ಆದರೂ ಈಗ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎಂದು ತಿಳಿಸಿದರು.

ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ರಾಜ್ಯ ಸರ್ಕಾರಕ್ಕೆ ಟಿಕೆಟ್ ದರ ಹೆಚ್ಚಳ ಮಾಡಬೇಕೆಂದು ಪ್ರಸ್ತಾಪವಿಟ್ಟಿತ್ತು. ಡೀಸೆಲ್ ಬೆಲೆ, ಬಿಡಿಭಾಗಗಳ ನಿರ್ವಹಣೆ ವೆಚ್ಚ ಎಲ್ಲವೂ ಜಾಸ್ತಿಯಾಗಿದೆ. ಆದರೆ ಬಸ್ ಟಿಕೆಟ್ ದರ ಮಾತ್ರ ಕಳೆದ 4 ವರ್ಷದಿಂದಲೂ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯು ನಷ್ಟದಲ್ಲಿ ಬಸ್ ಗಳನ್ನು ಓಡಿಸುತ್ತಿದ್ದು ಬಸ್ ಟಿಕೆಟ್ ದರ ಪರಿಷ್ಕರಣೆ ಅನಿವಾರ್ಯ ಎಂದು ತನ್ನ ಪ್ರಸ್ತಾವದಲ್ಲಿ ತಿಳಿಸಿತ್ತು.

ಶಕ್ತಿ ಯೋಜನೆ ಎಫೆಕ್ಟ್

2023ರಿಂದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ ಆ ಟಿಕೆಟ್ ನ ವೆಚ್ಚದ ಭಾಗಶಃ ಹಣವನ್ನು ಮಾತ್ರ ಮಾಡಿದೆ. ಇದರಿಂದಾಗಿಯೂ ಕೆಎಸ್ ಆರ್ ಟಿಸಿ ನಷ್ಟದಲ್ಲಿದೆ.

2020ರಲ್ಲಿ ಸಾರಿಗೆ ಸಂಸ್ಥೆಯು ಕೊನೆಯ ಬಾರಿ ಬಸ್ ಟಿಕೆಟ್ ದರವನ್ನು ಹೆಚ್ಚಿಸನಿತ್ತು. ಆಗ ಡೀಸೆಲ್ ಬೆಲೆ 60 ರುಪಾಯಿ ಇತ್ತು. ಇದೀಗ 90 ರುಪಾಯಿ ದಾಟಿದೆ ಎಂದು ಕೆಎಸ್ ಆರ್ ಟಿಸಿ ಟಿಕೆಟ್ ದರ ಏರಿಸಲು ತಾರ್ಕಿಕ ಕಾರಣ ನೀಡಿತ್ತು. ಹೀಗಾಗಿ ಬಸ ದರದಲ್ಲೂ ಶೇಕಡಾ 40ರಷ್ಚು ಹೆಚ್ಚಿಸಲೇಬೇಕಾಗಿದೆ. ಲಾಭದ ಉದ್ದೇೆಶಕ್ಕಲ್ಲದಿದ್ದಲೂ ಸಾರಿಗೆ ಸಂಸ್ಥೆಯನ್ನು ನಷ್ಟದಿಂದ ಬಚಾವ್ ಮಾಡಲು ದರ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಸುಮಾರು 10 ದಿನಗಳ ಹಿಂದೆ ಕೆಎಸ್ ಆರ್ ಟಿಸಿಯು ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಿತ್ತು.

ಡೀಸೆಲ್ ಬೆಲೆ 3.50 ರೂ ಹೆಚ್ಚಳ

ಇದೀಗ ಲೋಕಸಭಾ ಚುನಾವಣೆ ಮುಗಿದ ಬಳಿಕ ಜೂನ್ 15ರಂದು ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ 3 ರೂಪಾಯಿ ಮತ್ತು ಡೀಸೆಲ್ ಬೆೆಲೆ 3.50 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಹೀಗಾಗಿ ಪೆಟ್ರೋಲ್ ಬೆಲೆ ಮೇಲಿದ್ದು ಶೇಕಡಾ 25.92 ಮಾರಾಟ ತೆರಿಗೆಯನ್ನು ಶೇಕಡಾ 29.84 ಏರಿಸಲಾಗಿದೆ. ಅಂದರೆ ಸುಮಾರು 3.92%ರಷ್ಟು ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಡಿಸೇಲ್ ಬೆಲೆಯನ್ನು ಸಹ ಪ್ರಸ್ತುತ ಶೇಕಡಾ 14.34ರಿಂದ ಶೇಕಡಾ 18.44ಗೆ ಏರಿಸಿ ಶೇಕಡಾ 4.1% ರಷ್ಟು ಮಾರಾಟ ತೆರಿಗೆಯನ್ನು ಜಾಸ್ತಿ ಮಾಡಲಾಗಿದೆ. ಹೀಗಾಗಿ ಇಂದಿನ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 99.84 ರೂ.ಪಾಯಿ ಇದ್ದದು 102.84 ರೂ‌ಪಾಯಿಗೆತಲುಪಿದೆ. ಡೀಸೆಲ್ ಗೆ ಪ್ರತಿ ಲೀಟರ್ಗೆ 85.93 ರೂ ಇದ್ದುದು 89.43ರೂಪಾಯಿಗೆ ತಲುಪಿದೆ.

ಈ ಕಾರಣದಿಂದಾಗಿ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ನಾಗರಿಕರು ಸಂತಸಗೊಂಡಿದ್ದಾರೆ.

You May Also Like

More From Author

+ There are no comments

Add yours