ನಮ್ಮ ಒಟ್ಟಾರೆ ಆರೋಗ್ಯ (Health) ಹಾಗೂ ಯೋಗಕ್ಷೇಮಕ್ಕೆ ಆಯುರ್ವೇದವು (Ayurveda) ಹಲವು ನೈಸರ್ಗಿಕ ವಿಧಾನಗಳನ್ನು ನೀಡುತ್ತದೆ. ಅಂಥ ನೈಸರ್ಗಿಕ ವಿಧಾನಗಳ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದವು ನಮ್ಮನ್ನು ಉತ್ತೇಜಿಸುತ್ತದೆ. ಹಾಗೆಯೇ ಕಣ್ಣುಗಳ ಆರೋಗ್ಯಕ್ಕೂ (Eye Health) ಆಯುರ್ವೇದದಲ್ಲಿ ಹಲವು ಪರಿಣಾಮಕಾರಿಯಾದ ಪರಿಹಾರಗಳಿವೆ. ಆಯುರ್ವೇದದ ಪ್ರಕಾರ ಪಿತ್ತ ದೋಷವು ಕಣ್ಣುಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಸಮತೋಲಿತ ಆಯುರ್ವೇದ ಆಹಾರವು ಆರೋಗ್ಯಕರ ಕಣ್ಣುಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಜೀವನಶೈಲಿಯಲ್ಲಿ (Life Style) ಕೆಲ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯಕರ ಕಣ್ಣಿಗೆ ಅಗತ್ಯವಾಗಿದೆ.
ಈ ಬಗ್ಗೆ ಮಾತನಾಡಿರುವ ಡಾ. ಬಸು ಕಣ್ಣಿನ ಆಸ್ಪತ್ರೆಯ ನಿರ್ದೇಶಕರಾದ ಡಾ. ಮನ್ದೀಪ್ ಸಿಂಗ್ ಬಸು ಅವರು ಆಯುರ್ವೇದದ ತಂತ್ರಗಳು, ಆಹಾರದ ಹೊಂದಾಣಿಕೆಗಳು, ಜೀವನಶೈಲಿ ಬದಲಾವಣೆಗಳು ಮತ್ತು ಗಿಡಮೂಲಿಕೆಗಳು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತವೆ. ಹಾಗೆಯೇ ಸಾಕಷ್ಟು ನೀರಿನ ಸೇವನೆ, ಹಣ್ಣುಗಳು ಮತ್ತು ಗಿಡಮೂಲಿಕೆ ಚಹಾಗಳಂತಹ ಹೈಡ್ರೀಕರಿಸುವ ಆಹಾರಗಳ ಸೇವನೆಯೂ ಪ್ರಮುಖವಾಗಿದೆ. ಹಾಗೆಯೇ ಸೌತೆಕಾಯಿಗಳು, ಎಲೆಗಳ ಸೊಪ್ಪುಗಳು, ಎಳನೀರು ಮತ್ತು ದ್ರಾಕ್ಷಿ ಮತ್ತು ಕಲ್ಲಂಗಡಿಗಳಂತಹ ತಂಪಾಗಿಸುವ ಮತ್ತು ಪೋಷಣೆಯ ಆಹಾರ ಸೇವನೆಯೂ ಮುಖ್ಯ. ಹೆಚ್ಚುವರಿಯಾಗಿ ತುಪ್ಪದ ದೈನಂದಿನ ಸೇವನೆಯೂ ಪ್ರಯೋಜನಕಾರಿಯಾಗಿದೆ ಎಂದು ಹೇಳುತ್ತಾರೆ.
ಕಣ್ಣಿನ ಆರೋಗ್ಯಕ್ಕಾಗಿ ಜೀವನಶೈಲಿಯಲ್ಲಿ ಯಾವ ಬದಲಾವಣೆ ಮಾಡಿಕೊಳ್ಳಬೇಕು?
- ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಕಣ್ಣಿನ ವ್ಯಾಯಾಮಗಳನ್ನು ಸೇರಿಸುವುದು ಮತ್ತು ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು ನಿರ್ಣಾಯಕವಾಗಿದೆ ಎಂದು ತಜ್ಞರು ಹೇಳುತ್ತಾರೆ.
- ಕಣ್ಣಿನ ಸ್ವಚ್ಛತೆ ಮತ್ತು ಮತ್ತು ಪರಿಸರ ಮಾಲಿನ್ಯಕಾರಕಗಳಿಂದ ರಕ್ಷಣೆ ಪಡೆಯುವುದೂ ಮುಖ್ಯ. ಇದು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ಯೋಗ ಮತ್ತು ಧ್ಯಾನದಂತಹ ಒತ್ತಡ ನಿರ್ವಹಣೆ ತಂತ್ರಗಳನ್ನು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಶಿಫಾರಸು ಮಾಡಲಾಗುತ್ತದೆ.
- ನಿಯಮಿತವಾಗಿ ಕಣ್ಣಿನ ತಜ್ಞರಿಂದ ಮಾರ್ಗದರ್ಶನ ಪಡೆಯುವುದು ಅಗತ್ಯವಾಗಿದೆ.
- ಆಯುರ್ವೇದವು ನೇತ್ರ ತರ್ಪಣ ಮತ್ತು ನೇತ್ರ ಬಸ್ತಿಯಂತಹ ವಿಶೇಷ ಚಿಕಿತ್ಸೆಗಳನ್ನು ವಿವಿಧ ಕಣ್ಣಿನ ಕಾಯಿಲೆಗಳಿಗೆ ನೀಡುತ್ತದೆ. ಇವು ಆರೋಗ್ಯಕರ ದೃಷ್ಟಿಗೆ ಕೊಡುಗೆ ನೀಡುವುದಲ್ಲದೆ, ಅನಾರೋಗ್ಯವನ್ನು ತಪ್ಪಿಸುವ ಮೂಲಕ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಉತ್ತೇಜಿಸುತ್ತದೆ.
ಕಣ್ಣಿನ ಆರೋಗ್ಯಕ್ಕೆ ಆಹಾರ ಹಾಗೂ ಗಿಡಮೂಲಿಕೆ
ಕಣ್ಣಿನ ಆರೋಗ್ಯ ಕುರಿತಂತೆ ಮಾತನಾಡಿರುವ ಕೊಯಮತ್ತೂರಿನ ಆರ್ಯ ವೈದ್ಯ ಫಾರ್ಮಸಿ ಲಿಮಿಟೆಡ್ನ ಉಪಾಧ್ಯಕ್ಷ ಡಾ. ಕಾರ್ತಿಕ್ ಕೃಷ್ಣನ್ ಅವರು, ತುಪ್ಪ, ಬಾರ್ಲಿ, ಗೋಧಿ, ಶಾಸ್ತಿಕ ಶಾಲಿ (ಹಳೆಯ ಅಕ್ಕಿ), ಸೈಂಧವ ಲವಣ (ಕಲ್ಲು ಉಪ್ಪು), ಒಣದ್ರಾಕ್ಷಿ ಮತ್ತು ದಾಳಿಂಬೆಗಳು ಕಣ್ಣಿನ ಆರೋಗ್ಯವನ್ನು ಬೆಂಬಲಿಸುತ್ತವೆ. ಹೆಚ್ಚುವರಿಯಾಗಿ ಇವು ಇಡೀ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೇ ಹೆಚ್ಚುವರಿ ಉತ್ತೇಜನಕ್ಕಾಗಿ, ಶತಾವರಿ ಮತ್ತು ಹೆಸರುಕಾಳಿನಂಥ ಆಹಾರ ಸೇವನೆಯು ನಿಮ್ಮ ದೃಷ್ಟಿಯ ಸ್ಪಷ್ಟತೆ ಮತ್ತು ಚೈತನ್ಯವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಹೇಳುತ್ತಾರೆ.
ಕಣ್ಣಿನ ಆರೋಗ್ಯಕ್ಕೆ ಈ ಅಭ್ಯಾಸಗಳು ಸಹಕಾರಿ
- ಕಣ್ಣಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅಂಜನ (ಕೊಲಿರಿಯಮ್) ಮತ್ತು ನಾಸ್ಯ (ಮೂಗಿನ ಮೂಲಕ ಔಷಧಗಳ ಒಳನುಸುಳುವಿಕೆ) ನಂತಹ ಸಾಂಪ್ರದಾಯಿಕ ಅಭ್ಯಾಸಗಳನ್ನು ಶಿಫಾರಸು ಮಾಡಲಾಗುತ್ತದೆ.
- ಈ ಅಭ್ಯಾಸಗಳು ಕಫ ದೋಷವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಪೋಷಣೆ ಮತ್ತು ನಯಗೊಳಿಸುವಿಕೆಯನ್ನು ನಿಯಂತ್ರಿಸುತ್ತದೆ.
- ಹಾಗೆಯೇ ತ್ರಿಫಲ ಕಷಾಯದಿಂದ ನಿಯಮಿತವಾಗಿ ಕಣ್ಣುಗಳನ್ನು ತೊಳೆಯುವುದು ಪ್ರಯೋಜನಕಾರಿಯಾಗಿದೆ. ಶಕ್ತಿಯುತವಾದ ಗಿಡಮೂಲಿಕೆಗಳ ಕಷಾಯಗಳು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಕಣ್ಣುಗಳನ್ನು ಬಲಪಡಿಸುತ್ತದೆ.
- ಕುತೂಹಲಕಾರಿಯಾಗಿ, ಪಾದದ ಆರೈಕೆ ಕೂಡ ಕಣ್ಣಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪದಾಭ್ಯಂಗ, ಎಣ್ಣೆಯಿಂದ ಕಾಲು ಮಸಾಜ್ ಕಣ್ಣುಗಳಿಗೆ ಪ್ರಯೋಜನಗಳನ್ನು ನೀಡುತ್ತದೆ ಎಂಬುದಾಗಿ ತಜ್ಞರು ಹೇಳುತ್ತಾರೆ.
- ಅಂತಿಮವಾಗಿ, ಹಗಲಿನ ನಿದ್ದೆ ಮತ್ತು ರಾತ್ರಿ ಎಚ್ಚರವಾಗಿರುವುದನ್ನು ತಪ್ಪಿಸಬೇಕು. ಆ ಮೂಲಕ ಸರಿಯಾದ ನಿದ್ರೆಯ ಮಾದರಿಗಳನ್ನು ಅನುಸರಿಸಬೇಕು.
- ಇದು ದೇಹದ ನೈಸರ್ಗಿಕ ಲಯವನ್ನು ಬೆಂಬಲಿಸುತ್ತದೆ. ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ದೃಷ್ಟಿಯನ್ನು ಉತ್ತೇಜಿಸುತ್ತದೆ.
+ There are no comments
Add yours