ಮುಡಾ ಹಗರಣ: ಸಿಎಂ ಆಗಿರಲು ಸಿದ್ದರಾಮಯ್ಯ ನಾಲಾಯಕ್, ಮೊದಲು ಶುದ್ಧರಾಮಯ್ಯ ಆಗಲಿ- ಮಾಜಿ ಸಂಸದ ಮುನಿಸ್ವಾಮಿ

0 min read

ಹೈಲೈಟ್ಸ್‌:

  • ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಇರಲು ನಾಲಯಕರು.
  • ಕೂಡಲೇ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಆರೋಪದಿಂದ ಮುಕ್ತರಾಗಿ ಶುದ್ಧರಾಮಯ್ಯ ಆಗಿ ಹೊರ ಬರಬೇಕು
  • ಬಸವನಗೌಡ ಯತ್ನಾಳ ಅವರು ಭ್ರಮನಿರಸದಲ್ಲಿದ್ದಾರೆ. ಅವರು ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಮಾತನಾಡಲಿ.

ಬಳ್ಳಾರಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ಕೈಗೊಂಡ ವೇಳೆ ಇದಕ್ಕೆ ವಿರುದ್ಧವಾಗಿ ಪ್ರತಿ ತಾಲೂಕಿನಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಟೀಕಿಸಿದರು. ಈಗ ವರಸೆ ಬದಲಿಸಿದ್ದಾರೆ ಎಂದು ಮಾಜಿ ಸಂಸದ ಮುನಿಸ್ವಾಮಿ ಟೀಕಿಸಿದ್ದಾರೆ.

ಸಿದ್ದರಾಮಯ್ಯ ವಿಪಕ್ಷ ನಾಯಕರಾದ ವೇಳೆ ಬಿಎಸ್ ವೈ ವಿರುದ್ಧ ಆರೋಪ ಕೇಳಿ ಬಂದ ವೇಳೆ ರಾಜೀನಾಮೆಗೆ ಆಗ್ರಹಿಸಿದರು. ಆದರೆ, ಈಗ ಆಡಳಿತಕ್ಕೆ ಬಂದ ಬಳಿಕ ಹೇಳಿಕೆ ಬದಲಾಯಿಸಿದ್ದಾರೆ. ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಇರಲು ನಾಲಾಯಕ್. ಕೂಡಲೇ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಆರೋಪದಿಂದ ಮುಕ್ತರಾಗಿ ಶುದ್ಧರಾಮಯ್ಯ ಆಗಿ ಹೊರ ಬರಬೇಕು ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಇರಲು ನಾಲಯಕರು. ಕೂಡಲೇ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಆರೋಪದಿಂದ ಮುಕ್ತರಾಗಿ ಶುದ್ಧರಾಮಯ್ಯ ಆಗಿ ಹೊರ ಬರಬೇಕುಎಂದು ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಸಂಸದ ಮುನಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಈ ಹಿಂದೆ ೧೪ ಸೈಟ್ ಗಳನ್ನು ನಾನೇಕೆ ವಾಪಸ್ ಕೊಡಬೇಕೆಂದಿದ್ದ ಸಿದ್ದರಾಮಯ್ಯ ಅವರು ಈಗ ನಿವೇಶನಗಳನ್ನು ವಾಪಸ್ ನೀಡಲು ಸಿದ್ಧರಾಗಿದ್ದಾರೆ. ಸೈಟ್ ವಾಪಸ್ ಕೊಟ್ಟ ಕ್ಷಣ ಅವರು ನಿರಾಪರಾಧಿ ಆಗಲ್ಲ. ಕೇವಲ ೧೪ ಸೈಟ್ ಮಾತ್ರವಲ್ಲ, ಮುಡಾದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸುಮಾರು ಐದು ಸಾವಿರ ಕೋಟಿ ಹಗರಣವಾಗಿದ್ದು ಯಾರು ಯಾರಿಗೆ ನಿವೇಶನ ಹಂಚಿಕೆಯಾಗಿದೆ ಎಂಬುವುದನ್ನು ತನಿಖೆಗೆ ಒಳಪಡಿಸಬೇಕು ಎಂದರು.

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ದಲಿತರಿಗೆ ವಂಚಿಸಲಾಗಿದೆ. ಸಂವಿಧಾನ, ಕಾನೂನು ಬಗ್ಗೆ ಗೌರವವಿದ್ದರೆ ಕೂಡಲೇ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಬ್ಬ ಶಾಸಕರು, ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸರು ಸಹ ನೆಮ್ಮದಿಯಿಂದ ಇಲ್ಲ. ಮತಗೋಸ್ಕರ ಜಾತಿ ಜಾತಿಗಳ ವಿರುದ್ಧ ವಿರೋದ ಕಟ್ಟಿ, ದೇಶ ವಿರೋಧಿ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಇಂತಹವರಿಗೆ ಇಟಲಿಯ ಮೇಡಂ ಸೋನಿಯಾ ಗಾಂಧಿ, ಸಿದ್ದರಾಮಯ್ಯ ಅವರ ಕೃಪಕಟಾಕ್ಷವಿದೆ ಎಂದರು.

You May Also Like

More From Author

+ There are no comments

Add yours