ದಲಿತರನ್ನು RSS ಸರಸಂಘಚಾಲಕನ್ನಾಗಿ ಮಾಡಿ; ಗೂಳಿಹಟ್ಟಿ ಪ್ರಶ್ನೆಗೆ ಸಂತೋಷ್ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ ಸವಾಲು‌

0 min read

ಹೈಲೈಟ್ಸ್‌:

  • ಚರ್ಚೆಗೆ ಗ್ರಾಸವಾಗಿರುವ ಆರೆಸ್ಸೆಸ್ ಕುರಿತಾದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿಕೆ
  • ನಾಗಪುರದ ಆರೆಸ್ಸೆಸ್ ಕಛೇರಿಯ ಹೆಡಗೇವಾರ್ ಮ್ಯಾಸಿಯಂಗೆ ಭೇಟಿ ನೀಡಿದ್ದ ಗೂಳಿಹಟ್ಟಿ
  • ಈ ವೇಳೆ ದಲಿತ ಎಂಬ ಕಾರಣಕ್ಕೆ ಮ್ಯೂಸಿಯಂಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪ
  • ಗೂಳಿಹಟ್ಟಿ ಹೇಳಿಕೆ ಮುಂದಿಟ್ಟು ಆರೆಸ್ಸೆಸ್, ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತರಾಟೆ
  • ದಲಿತರನ್ನು ಆರೆಸ್ಸೆಸ್ ಸರಸಂಘಚಾಲಕರನ್ನಾಗಿ ಮಾಡಿ ಎಂದು ಸವಾಲು

ಬೆಳಗಾವಿ: ಆರೆಸ್ಸೆಸ್ ಸರಸಂಘಚಾಲಕರಾಗಿ ದಲಿತರನ್ನು ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಬುಧವಾರ ಮಾತನಾಡಿ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸ್ಪಷ್ಟವಾದ ಪ್ರಶ್ನೆಯನ್ನು ಬಿಎಲ್ ಸಂತೋಷ್ ಗೆ ಕೇಳಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.

ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಮ್ಯೂಸಿಯಂಗೆ ದಲಿತ ಎಂಬ ಕಾರಣಕ್ಕಾಗಿ ಪ್ರವೇಶ ಕೊಟ್ಟಿಲ್ಲ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಎಂದಿದ್ದಾರೆ. ಅಲ್ಲದೆ ಈ ನಿಯಮ ಬಿಜೆಪಿಯ ದಲಿತ ನಾಯಕರಿಗೆ ಅನ್ವಯ ಆಗುತ್ತಾ? ಎಂದು ಕೇಳಿದ್ದಾರೆ. ಹಿಂದುತ್ವದಲ್ಲಿ ಆರ್ ಎಸ್ ಎಸ್ ತತ್ವದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ, ಬಡವರಿಗೆ ಜಾಗ ಇಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.

ಆರೆಸ್ಸೆಸ್ ನವರು ದಲಿತ ಸಮುದಾಯದ ಗೂಳಿಹಟ್ಟಿಗೆ ಪ್ರವೇಶ ನೀಡದೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಬಸವ ತತ್ವ ಪಾಲನೆ ಮಾಡ್ತೀವಿ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಇದಕ್ಕೆ ಉತ್ತರಿಸಬೇಕು. ಇದು ಅವರ ಪಕ್ಷದ ಮಾಜಿ ಸಚಿವ ಕೇಳುತ್ತಿರುವ ಪ್ರಶ್ನೆ ಎಂದರು.

ಆರೆಸ್ಸೆಸ್ ನಲ್ಲಿ ದಲಿತರಿಗೆ ಅವಕಾಶ ಇದ್ಯಾ?
ಆರ್ ಎಸ್ ಎಸ್ ಪ್ರಯೋಗ ಶಾಲೆಯನ್ನು ಬಂದ್ ಮಾಡಿ.‌ ಇದರಿಂದ ಕರ್ನಾಟಕಕ್ಕೆ ಯಾವುದೇ ಲಾಭ ಇಲ್ಲ. ನಿಮ್ಮ ನಾಯಕರು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ. ಆರ್ ಎಸ್ ಎಸ್ ನಲ್ಲಿ ದಲಿತರಿಗೆ ಅವಕಾಶ ಇದ್ಯಾ? ಹಾಗಾದರೆ ಸರಸಂಘಚಾಲಕನ್ನಾಗಿ ಮಾಡಿ ಎಂದು ಸವಾಲು. ಅವರ ದೃಷ್ಟಿಕೋನದಲ್ಲಿ ಒಂದೇ ಧರ್ಮ ಇರುವುದು. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರನ್ನೇ ಇವರು ಹಚ್ಚಿಕೊಳ್ಳಲ್ಲ, ಅನ್ಯರನ್ನು ಸೇರಿಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಹುಬ್ಬಳ್ಳಿಯ ಮುಸ್ಲಿಂ ಸಮಾವೇಶದಲ್ಲಿ ಐಸಿಸ್ ಸಂಘಟನೆ ಸಂಪರ್ಕ ಹೊಂದಿದವನು ವೇದಿಕೆ ಹಂಚಿಕೊಂಡಿದ್ದಾನೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇವರ ರೌದ್ರಾವತಾರ ಆಗಲೂ ಇತ್ತು, ಇವಾಗಲೂ ಹೀಗೆ ಇದೆ. ಅವರ ಮಾತಿಗೆ ಅವರ ಸ್ವಂತ ಪಕ್ಷದವರಿಗೆ ಮಾನ್ಯತೆ ಕೊಡಲ್ಲ ಎಂದರು.

ಗೂಳಿಹಟ್ಟಿ ಶೇಖರ್ ಹೇಳಿದ್ದೇನು?
ಗೂಳಿಹಟ್ಟಿ ಶೇಖರ್ ಅವರು ತಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ನಾಗ್ಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ದ ಹೆಡಗೇವಾರ್ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಮಾತ್ರವಲ್ಲದೆ ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬಲ್ಲಿರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ. ಚುನಾವಣೆ ಘೋಷಣೆಯಾಗುವುದಕ್ಕೂ 3 ತಿಂಗಳು ಹಿಂದೆ ಆರೆಸ್ಸೆಸ್ ಕಾರ್ಯಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಹೆಡಗೇವಾರ್ ವಸ್ತು ಸಂಗ್ರಾಹಾಲಯದಲ್ಲಿ ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು. ಇದರಿಂದ ನನಗೆ ಒಳಗೆ ಹೋಗಲಾಗಲಿಲ್ಲ ಎಂದು ಹೇಳಿದ್ದು. ಅವರ ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

You May Also Like

More From Author

+ There are no comments

Add yours