Bollywood News: ಶೂಟಿಂಗ್ ವೇಳೆ ಹಿರಿಯ ನಟನ ವರ್ತನೆ ಖಂಡಿಸಿ ಕಪಾಳಮೋಕ್ಷ ಮಾಡಿದ್ದ ಸ್ಟಾರ್‌ ನಟಿ! ಆಗಿದ್ದೇನು?

News18 Kannada

ಬಾಲಿವುಡ್‌ ಸಿನಿಮಾ ರಂಗ ಒಂದಲ್ಲೊಂದು ವಿಷಯಗಳಿಗೆ ಸುದ್ದಿಯಾಗುತ್ತಲೇ ಇರುತ್ತೆ. ಬಾಲಿವುಡ್‌ನ ಸುದೀರ್ಘ ಇತಿಹಾಸದಲ್ಲಿ ಹತ್ತಾರು ರೋಚಕ ಕಥೆಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಇದು ಕೂಡ ಅಂತಹದ್ದೇ ಕಥೆ. ಒಂದು ಕಾಲದಲ್ಲಿ ಬಾಲಿವುಡ್‌ ಸಿನಿಮಾ ರಂಗವನ್ನು ಆಳಿದ ಅತೀ ಬೇಡಿಕೆಯ ನಟಿಯ ಕೆನ್ನೆಗೆ ನಟನೊಬ್ಬ ಹೊಡೆದ ರೋಚಕ ಕಥೆ.

02
News18 Kannada

ಹೌದು.. ಈ ಕಥೆಯು 70-80 ರ ದಶಕದಲ್ಲಿ ಬಾಲಿವುಡ್ ಸಿನಿಮಾ ರಂಗವನ್ನು ಆಳಿದ ನಟಿ ಜಯಪ್ರದಾ ಅವರಿಗೆ ಸಂಬಂಧಿಸಿದ್ದಾಗಿದೆ. ಒಮ್ಮೆ ಜಯಪ್ರದಾ ಅವರು ತುಂಬಿದ ಸೆಟ್‌ನಲ್ಲಿ ಚಿತ್ರರಂಗದ ಹಿರಿಯ ನಟನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ತಿಳಿದರೆ ನೀವು ಆಶ್ಚರ್ಯಗೊಳ್ಳುತ್ತೀರಿ. ಅಷ್ಟಕ್ಕೂ ಅಂದು ಏನಾಯಿತು ಅನ್ನೋದನ್ನು ಇಲ್ಲಿ ತಿಳಿಯೋಣ.

03
News18 Kannada

70-80 ರ ದಶಕದಲ್ಲಿ ಬಾಲಿವುಡ್ ರಂಗ ಟಾಪ್‌ ಸುಂದರಿಯರ ಪೈಕಿ ಜಯಪ್ರದಾ ಹೆಸರು ಎತ್ತರದ ಸ್ಥಾನದಲ್ಲಿ ಕೇಳಿಬರುತ್ತಿತ್ತು. ತನ್ನ ಸೌಂದರ್ಯಕ್ಕೆ ಮಾತ್ರವಲ್ಲದೆ ತನ್ನ ಕಾಲದಲ್ಲಿ ಹಿಂದಿ ಚಿತ್ರರಂಗಕ್ಕೆ ಅನೇಕ ಹಿಟ್ ಚಿತ್ರಗಳನ್ನು ನೀಡಿದವರು ಜಯಪ್ರದಾ. ಸೂಪರ್‌ಸ್ಟಾರ್ ಜಿತೇಂದ್ರ ಮತ್ತು ಜಯಪ್ರದಾ ನಟಿಯನ್ನು ಜನರು ಹೆಚ್ಚು ಇಷ್ಟಪಡಲು ಪ್ರಾರಂಭಿಸಿದರು.

04
News18 Kannada

‘ಸರ್ಗಂ’ ಚಿತ್ರದ ಮೂಲಕ ಜಯಪ್ರದಾ ಪಾದಾರ್ಪಣೆ ಮಾಡಿದ್ದು, ಮೊದಲ ಚಿತ್ರದಲ್ಲೇ ರಾತ್ರೋರಾತ್ರಿ ಸ್ಟಾರ್ ಆದದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಚಿತ್ರದ ಸೆಟ್‌ನಲ್ಲಿ ನಟಿಯೊಂದಿಗೆ ಬಹಳ ವಿಚಿತ್ರವಾದ ಘಟನೆ ನಡೆದಿದೆ ಅನ್ನೋದು ಅನೇಕ ಮಂದಿಗೆ ತಿಳಿದಿಲ್ಲ. ಈ ಘಟನೆಯನ್ನು ಜಯಪ್ರದಾ ಅವರು ಎಂದಿಗೂ ಮರೆಯಲು ಸಾಧ್ಯವಿಲ್ಲ.

05
News18 Kannada

ವಾಸ್ತವವಾಗಿ, ನಟಿ ಜಯಪ್ರದಾ ಅವರು ಆ ಚಿತ್ರದಲ್ಲಿ ಖ್ಯಾತ ಖಳನಾಯಕ ದಿಲೀಪ್ ತಾಹಿಲ್ ಅವರೊಂದಿಗಿನ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು. ಈ ದೃಶ್ಯದಲ್ಲಿ ನಟ ಸೋತಿದ್ದು, ತಾಳ್ಮೆ ಕಳೆದುಕೊಂಡು ಜಯಪ್ರದಾ ಅವರ ಜೊತೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾರೆ.

06
News18 Kannada

ನಟ ದಿಲೀಪ್‌ನ ಈ ವರ್ತನೆಯಿಂದ ಜಯಪ್ರದಾ ತುಂಬಾ ನೊಂದುಕೊಂಡಿದ್ದರು. ಸುಮ್ಮನಿರುವಂತೆ ಸೂಚಿಸಿದರೂ ಸುಮ್ಮನಾಗಲಿಲ್ಲ. ಹಾಗಾಗಿ ಅವರು ಎಲ್ಲರ ಮುಂದೆ ನಟ ದಿಲೀಪ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.

07
News18 Kannada

ಇದಾದ ನಂತರ ಶೂಟಿಂಗ್ ಸೆಟ್‌ನಲ್ಲಿ ವಾತಾವರಣ ಬದಲಾಗಿದೆ. ದಿಲೀಪ್ ತಾಹಿಲ್ ಮೇಲಿನ ಜಯಪ್ರದಾ ಅವರ ಈ ಕಪಾಳಮೋಕ್ಷ ಪ್ರಕರಣ ಹಲವು ದಿನಗಳ ಕಾಲ ಇಂಡಸ್ಟ್ರಿಯಲ್ಲಿ ಚರ್ಚೆಯಾಗಿತ್ತು. ಆದರೆ ಈ ಬಗ್ಗೆ ಜಯಪ್ರದಾ ಅವರನ್ನು ಕೇಳಿದಾಗ, ನಾನು ಹೊಡೆದಿದ್ದು, ರಿಯಲ್ ಆಗಿ ಅಲ್ಲ, ರೀಲ್‌ ಲೈಫ್‌ಗೆ ಅರ್ಥಾತ್ ಸಿನಿಮಾಗಾಗಿ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.

08

ಕಳೆದ ವರ್ಷ 2023ರಲ್ಲಿ ನಟ ದಿಲೀಪ್ ತಾಹಿಲ್ ಅವರು ಜಯಪ್ರದಾ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಈ ಘಟನೆ ಮತ್ತೆ ಮುನ್ನೆಲೆಗೆ ಬಂದಿತ್ತು.

09
News18 Kannada

ಜಯಪ್ರದಾ ಅವರು ಹಿಂದಿ ಚಿತ್ರರಂಗವನ್ನು ಮಾತ್ರ ಆಳಲಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಅವರು ರಾಜಕೀಯದಲ್ಲಿಯೂ ತನ್ನ ಪ್ರಭಾವವನ್ನು ತೋರಿಸಿದರು. ಅವರು ತೆಲುಗು ದೇಶಂ ಪಕ್ಷದಿಂದ ರಾಜಕೀಯಕ್ಕೆ ಪ್ರವೇಶಿಸಿದ್ದರು. ಆದರೆ ಚಂದ್ರಬಾಬು ನಾಯ್ಡು ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದಾಗ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು ಮತ್ತು ನಂತರ ರಾಂಪುರದ ಸಂಸದರೂ ಆಗಿದ್ದರು. ಸದ್ಯ ಜಯಪ್ರದಾ ಅವರು ಬಿಜೆಪಿಯಲ್ಲಿದ್ದಾರೆ.

You May Also Like

More From Author

+ There are no comments

Add yours