ಹೈಲೈಟ್ಸ್:
- ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರಿಗೆ ಅತಿವಿನಯ ತೋರಿಸಬೇಡಿ ಎಂದ ವಿಶ್ವನಾಥ್
- ಭಾನುವಾರ ಸುಧಾಕರ್ ಬಂದಾಗ ನಾನು ಮನೆಯಲ್ಲಿ ಇರಲಿಲ್ಲ ಎಂದ ವಿಶ್ವನಾಥ್
- ನಾವು ಮೋದಿಯವರಿಗಾಗಿ ಮತವನ್ನು ಕೇಳುತ್ತೇವೆ ಎಂದ ವಿಶ್ವನಾಥ್
ಬೆಂಗಳೂರು / ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಯ ವೇಳೆ ಗಿಮಿಕ್ ಮಾಡುವುದನ್ನು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಮೊದಲು ಬಿಡಬೇಕು, ಅತಿ ವಿನಯಯಂ ಧೂರ್ತ ಲಕ್ಷಣಂ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಡಾ. ಸುಧಾಕರ್ ಅವರಿಗೆ ಸಲಹೆಯನ್ನು ನೀಡಿದ್ದಾರೆ.
” ಭಾನುವಾರ ಬೆಳಗ್ಗೆ ಐದು ಗಂಟೆಗೆ ಎದ್ದು ನಾನು ಮನೆಯಿಂದ ಹೊರಗೆ ಹೋಗಿದ್ದೆ, ಸುಧಾಕರ್ ಬರುವ ವಿಚಾರ ನನಗೆ ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ನನ್ನನ್ನು ಭೇಟಿಯಾಗಬೇಕು ಎಂದು ಮೆಸೇಜ್ ಮಾಡಿದ್ದರು. ಆದರೆ ಭಾನುವಾರವೇ ಬರುತ್ತೇನೆ ಎಂದು ಹೇಳಿರಲಿಲ್ಲ ” ಎಂದು ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಎಸ್. ಆರ್. ವಿಶ್ವನಾಥ್ ಜೊತೆಗಿನ ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್, ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ಮನೆಗೆ ಬೆಳಗ್ಗೆ ಹೋಗಿದ್ದರು. ಆದರೆ, ಬೆಳಗ್ಗೆನೇ ವಿಶ್ವನಾಥ್ ಮನೆಯಿಂದ ಹೊರಹೋಗಿದ್ದರು. ಹಾಗಾಗಿ, ಯಾವುದೇ ಮಾತುಕತೆ ಸಾಧ್ಯವಾಗದೇ ಸುಧಾಕರ್ ವಾಪಸ್ ಹೋಗಿದ್ದರು.
ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ” ಯಾರಾದರೂ ಮನೆಗೆ ಬಂದು ವಾಪಸ್ ಹೋದರೆ, ತಪ್ಪು ಸಂದೇಶ ಹೋಗುತ್ತದೆ. ಸುಧಾಕರ್ ಅವರು ಬರುವ ಮಾಹಿತಿ ನನಗಿರಲಿಲ್ಲ. ಬಂದು ವಾಪಸ್ ಹೋಗಿ ಅನುಕಂಪ ಪಡೆಯುವ ಕೆಲಸವನ್ನು ಮಾಡುವುದನ್ನು ಬಿಡಲಿ, ಅನಾವಶ್ಯಕವಾಗಿ ಸುಧಾಕರ್, ಯಲಹಂಕದವರನ್ನು ಖಳನಾಯಕರನ್ನಾಗಿ ಮಾಡಿದರು ” ಎಂದು ವಿಶ್ವನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಸುಧಾಕರ್ ಅವರು ಪದೇಪದೇ ಅಲೋಕ್ ಗೆ ಟಿಕೆಟ್ ಸಿಕ್ಕಿಲ್ಲ ಎಂದು ವಿಶ್ವನಾಥ್ ಬೇಸರದಲ್ಲಿದ್ದಾರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊದಲು ಆ ರೀತಿಯ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಬೇಕು. ಸುಧಾಕರ್ ಅವರು ಚಿಕ್ಕಬಳ್ಳಾಪುರದ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿದೆ, ಇನ್ಯಾಕೆ ನಾವು ಬೇಸರ ಮಾಡಿಕೊಳ್ಳೋಣ ಎಂದು ಎಸ್.ಆರ್.ವಿಶ್ವನಾಥ್ ಹೇಳಿದರು.
ಸುಧಾಕರ್ ಅವರು ಮೊದಲು ಇನ್ನೊಬ್ಬರ ಮೇಲೆ ವಿಶ್ವಾಸವನ್ನು ಇಡಲಿ, ಯಲಹಂಕದ ಮುಖಂಡರು ಇಂದು ( ಏಪ್ರಿಲ್ 1) ಸಭೆ ಸೇರಿ ನಾವೇ ಅವರನ್ನು ಕರೆಯುತ್ತೇವೆ. ಅಪನಂಬಿಕೆ ನಮ್ಮ ಮೇಲೆ ಇಟ್ಟುಕೊಂಡು ಹೋದರೆ ಅವರಿಗೇ ತೊಂದರೆ. ನನ್ನ ಕಾಲ್ ರೆಕಾರ್ಡ್ ಅನ್ನು ತೋರಿಸುತ್ತೇನೆ, ಅವರು ನಮಗೆ ಕಾಲ್ ಮಾಡಿದ್ದೇ ಆಗಿದ್ದಲ್ಲಿ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇ
+ There are no comments
Add yours