ಯಲಹಂಕದವರನ್ನು ಮಾಧ್ಯಮಗಳಲ್ಲಿ ’ವಿಲನ್’ ಮಾಡಿದ ಡಾ.ಸುಧಾಕರ್ : ಎಸ್.ಆರ್.ವಿಶ್ವನಾಥ್

1 min read

ಹೈಲೈಟ್ಸ್‌:

  • ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರಿಗೆ ಅತಿವಿನಯ ತೋರಿಸಬೇಡಿ ಎಂದ ವಿಶ್ವನಾಥ್
  • ಭಾನುವಾರ ಸುಧಾಕರ್ ಬಂದಾಗ ನಾನು ಮನೆಯಲ್ಲಿ ಇರಲಿಲ್ಲ ಎಂದ ವಿಶ್ವನಾಥ್
  • ನಾವು ಮೋದಿಯವರಿಗಾಗಿ ಮತವನ್ನು ಕೇಳುತ್ತೇವೆ ಎಂದ ವಿಶ್ವನಾಥ್

ಬೆಂಗಳೂರು / ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಯ ವೇಳೆ ಗಿಮಿಕ್ ಮಾಡುವುದನ್ನು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಮೊದಲು ಬಿಡಬೇಕು, ಅತಿ ವಿನಯಯಂ ಧೂರ್ತ ಲಕ್ಷಣಂ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಡಾ. ಸುಧಾಕರ್ ಅವರಿಗೆ ಸಲಹೆಯನ್ನು ನೀಡಿದ್ದಾರೆ.

” ಭಾನುವಾರ ಬೆಳಗ್ಗೆ ಐದು ಗಂಟೆಗೆ ಎದ್ದು ನಾನು ಮನೆಯಿಂದ ಹೊರಗೆ ಹೋಗಿದ್ದೆ, ಸುಧಾಕರ್ ಬರುವ ವಿಚಾರ ನನಗೆ ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ನನ್ನನ್ನು ಭೇಟಿಯಾಗಬೇಕು ಎಂದು ಮೆಸೇಜ್ ಮಾಡಿದ್ದರು. ಆದರೆ ಭಾನುವಾರವೇ ಬರುತ್ತೇನೆ ಎಂದು ಹೇಳಿರಲಿಲ್ಲ ” ಎಂದು ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಎಸ್. ಆರ್. ವಿಶ್ವನಾಥ್ ಜೊತೆಗಿನ ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್, ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ಮನೆಗೆ ಬೆಳಗ್ಗೆ ಹೋಗಿದ್ದರು. ಆದರೆ, ಬೆಳಗ್ಗೆನೇ ವಿಶ್ವನಾಥ್ ಮನೆಯಿಂದ ಹೊರಹೋಗಿದ್ದರು. ಹಾಗಾಗಿ, ಯಾವುದೇ ಮಾತುಕತೆ ಸಾಧ್ಯವಾಗದೇ ಸುಧಾಕರ್ ವಾಪಸ್ ಹೋಗಿದ್ದರು.

ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ” ಯಾರಾದರೂ ಮನೆಗೆ ಬಂದು ವಾಪಸ್ ಹೋದರೆ, ತಪ್ಪು ಸಂದೇಶ ಹೋಗುತ್ತದೆ. ಸುಧಾಕರ್ ಅವರು ಬರುವ ಮಾಹಿತಿ ನನಗಿರಲಿಲ್ಲ. ಬಂದು ವಾಪಸ್ ಹೋಗಿ ಅನುಕಂಪ ಪಡೆಯುವ ಕೆಲಸವನ್ನು ಮಾಡುವುದನ್ನು ಬಿಡಲಿ, ಅನಾವಶ್ಯಕವಾಗಿ ಸುಧಾಕರ್, ಯಲಹಂಕದವರನ್ನು ಖಳನಾಯಕರನ್ನಾಗಿ ಮಾಡಿದರು ” ಎಂದು ವಿಶ್ವನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಸುಧಾಕರ್ ಅವರು ಪದೇಪದೇ ಅಲೋಕ್ ಗೆ ಟಿಕೆಟ್ ಸಿಕ್ಕಿಲ್ಲ ಎಂದು ವಿಶ್ವನಾಥ್ ಬೇಸರದಲ್ಲಿದ್ದಾರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊದಲು ಆ ರೀತಿಯ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಬೇಕು. ಸುಧಾಕರ್ ಅವರು ಚಿಕ್ಕಬಳ್ಳಾಪುರದ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿದೆ, ಇನ್ಯಾಕೆ ನಾವು ಬೇಸರ ಮಾಡಿಕೊಳ್ಳೋಣ ಎಂದು ಎಸ್.ಆರ್.ವಿಶ್ವನಾಥ್ ಹೇಳಿದರು.

ಸುಧಾಕರ್ ಅವರು ಮೊದಲು ಇನ್ನೊಬ್ಬರ ಮೇಲೆ ವಿಶ್ವಾಸವನ್ನು ಇಡಲಿ, ಯಲಹಂಕದ ಮುಖಂಡರು ಇಂದು ( ಏಪ್ರಿಲ್ 1) ಸಭೆ ಸೇರಿ ನಾವೇ ಅವರನ್ನು ಕರೆಯುತ್ತೇವೆ. ಅಪನಂಬಿಕೆ ನಮ್ಮ ಮೇಲೆ ಇಟ್ಟುಕೊಂಡು ಹೋದರೆ ಅವರಿಗೇ ತೊಂದರೆ. ನನ್ನ ಕಾಲ್ ರೆಕಾರ್ಡ್ ಅನ್ನು ತೋರಿಸುತ್ತೇನೆ, ಅವರು ನಮಗೆ ಕಾಲ್ ಮಾಡಿದ್ದೇ ಆಗಿದ್ದಲ್ಲಿ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇ

 

You May Also Like

More From Author

+ There are no comments

Add yours