ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) ಮತ್ತು ಜಗದೀಶ್ ಶೆಟ್ಟರ್ (ಬಿಜೆಪಿ) ನಡುವೆ ಮುಖಾಮುಖಿ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದ್ದು ಎರಡೂ ಕುಟುಂಬಗಳು ಹಗ್ಗಜಗ್ಗಾಟಕ್ಕೆ ಕಡಿವಾಣ ಹಾಕಿ ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ.
ಒಂದು ಕಾಲದಲ್ಲಿ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸುತ್ತಿದ್ದ ಕ್ಷೇತ್ರವಾಗಿದ್ದ ಬೆಳಗಾವಿಯು ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಜನಬೆಂಬಲವನ್ನು ಕ್ರೋಢೀಕರಿಸುವ ಕುಟುಂಬ ರಾಜಕಾರಣದಿಂದ ತನ್ನ ಹೊಳಪು ಕಳೆದುಕೊಂಡಿದೆ. ಅಭಿವೃದ್ಧಿ, ರಾಜ್ಯ ಮತ್ತು ರಾಷ್ಟ್ರೀಯ ವ್ಯವಹಾರಗಳು, ನೀತಿಗಳು, ಮೂಲಸೌಕರ್ಯ ಇತ್ಯಾದಿಗಳಂತಹ ಪ್ರಮುಖ ವಿಷಯಗಳು ನಗಣ್ಯವಾಗಿವೆ. ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಮತ್ತು ಬಿಜೆಪಿ ಐದು ಕ್ಷೇತ್ರಗಳನ್ನು ಗೆದ್ದಿದೆ.
ಆರು ಬಾರಿ ಶಾಸಕರಾಗಿ, ಮಾಜಿ ಸಿಎಂ ಆಗಿರುವ ಜಗದೀಶ್ ಶೆಟ್ಟರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ 31 ವರ್ಷದ ಮೃಣಾಲ್ ಹೆಬ್ಬಾಳ್ಕರ್ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಪ್ರಬಲ ಲಿಂಗಾಯತ ಸಮುದಾಯದಿಂದ ಬಂದವರಾಗಿದ್ದಾರೆ. ಜಾತಿಯ ಹೊರತಾಗಿ ಸಿಎಂ, ವಿರೋಧ ಪಕ್ಷದನಾಯಕ ಹಾಗೂ ರಾಜ್ಯ ಬಿಜೆಪಿಯ ಮುಖ್ಯಸ್ಥರಾಗಿ ಅವರ ಅನುಭವವು ಶೆಟ್ಟರ್ ಗೆ ಹೆಚ್ಚಿನ ಬಲ ತರಲಿದೆ. ಬಿಜೆಪಿ ಶೆಟ್ಟರ್ ಅವರನ್ನು ಏಕೆ ಆಯ್ಕೆ ಮಾಡಿದೆ ಎಂದರೆ ಈ ವಿಭಾಗವು 2000 ರ ದಶಕದ ಆರಂಭದಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ ಮತ್ತು ಸುರೇಶ್ ಅಂಗಡಿ ಕುಟುಂಬ ಕಳೆದ ಐದು ಚುನಾವಣೆಗಳಲ್ಲಿ ಗೆದ್ದಿದೆ. ಅಂಗಡಿಯವರ ಮಗಳು ಶ್ರದ್ಧಾ ಜಗದೀಶ್ ಶೆಟ್ಟರ ಸೊಸೆ, ಹೀಗಾಗಿ ಶೆಟ್ಟರ್ ಬಿಜೆಪಿ ಮಣೆ ಹಾಕಿದೆ.
ಬೆಳಗಾವಿಯ ಬಿಜೆಪಿಯ ಒಂದು ವರ್ಗವು ಹುಬ್ಬಳ್ಳಿಯಿಂದ ಬಂದಿರುವ “ಹೊರಗಿನ” ಶೆಟ್ಟರ್ ಅವರನ್ನು ಪಕ್ಷದಿಂದ ಕಣಕ್ಕಿಳಿಸಿದ ಬಗ್ಗೆ ಅಸಮಾಧಾನಗೊಂಡಿದೆ. ಆದರೆ, ಬೆಳಗಾವಿಯಲ್ಲಿ ಜನರು ಮತ್ತು ಪಕ್ಷದ ಮುಖಂಡರು ತಮ್ಮನ್ನು ಒಪ್ಪಿಕೊಂಡಿದ್ದಾರೆ ಮತ್ತು ಮೋದಿ ಅಂಶವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂದು ಶೆಟ್ಟರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಮತ್ತೊಂದೆಡೆ, ಬೆಳಗಾವಿಯ ಹಲವು ಭಾಗಗಳಲ್ಲಿ ಮೃಣಾಲ್ ಅವರ ಹೈ ವೋಲ್ಟೇಜ್ ಪ್ರಚಾರವು ಅವರ ಜನಪ್ರಿಯತೆ ಹೆಚ್ಚಲು ಸಹಾಯ ಮಾಡಿದೆ. ಮೃಣಾಲ್ ಚೊಚ್ಚಲ ಬಾರಿ ಸ್ಪರ್ಧಿಸಿರುವುದರಿಂದ ಅವರ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜಕೀಯ ಚಾಣಕ್ಷತನದಿಂದಾಗಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿ ಸಚಿವೆಯಾಗಿದ್ದಾರೆ, ತಮ್ಮ ಸಹೋದರನನ್ನು ಎಂಎಲ್ ಸಿ ಮಾಡಿದ್ದಾರೆ. ಈಗ ಮಗನನ್ನು ರಾಷ್ಟ್ರ ರಾಜಕಾರಣಕ್ಕೆ ತರುತ್ತಿದ್ದಾರೆ. ಒಂದೊಮ್ಮೆ ಈ ಚುನಾವಣೆಯಲ್ಲಿ ಮಗ ಗೆದ್ದರೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಜೀವನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸೋಲು ಅವರ ರಾಜಕೀಯ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಪಟ್ಟಿದ್ದಾರೆ. ಬೆಳಗಾವಿ ರಾಜಕೀಯದ ಮೇಲೆಪ್ರಬಲ ಹಿಡಿತ ಸಾಧಿಸಿರುವ ಜಾರಕಿಹೊಳಿ ಸಹೋದರರ ಪ್ರಯತ್ನವನ್ನು ಹೆಬ್ಬಾಳ್ಕರ್ ಅವರ ಗೆಲುವು ಮೊಟಕುಗೊಳಿಸಬಹುದು. ಆದರೆ ಯಾವುದಕ್ಕೂ ಜಗ್ಗದ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್ ಸಹೋದರರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನುಪೂರ್ಣಗೊಳಿಸಲು ಯಾವುದೇ ರೀತಿಯ ಅತಿರೇಕಕ್ಕೆ ಹೋಗಬಹುದು ಎಂಬುದು ವಿಶ್ಲೇಷಕರ ಅಭಿಮತ.
ಶೆಟ್ಟರ್ ಮತ್ತು ಮೃಣಾಲ್ ಇಬ್ಬರೂ ಏಕವಚನದಲ್ಲಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಅವರ ಪಕ್ಷ ಮತ್ತು ಕಾರ್ಯಕರ್ತರು ಅಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಎರಡೂ ಪಕ್ಷಗಳು ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮುಂಚೂಣಿಯಲ್ಲಿದ್ದಾರೆಯೇ ಹೊರತು ಮೃಣಾಲ್ ಅಥವಾ ಪಕ್ಷದ ಇತರ ನಾಯಕರು ಮುಖ್ಯವಲ್ಲ.
+ There are no comments
Add yours