ಫುಡ್‌ ಪಾಯ್ಸಿನ್‌ನಿಂದ ಆಸ್ಪತ್ರೆ ಸೇರುತ್ತಿದ್ದಾರೆ ಮಕ್ಕಳು; ತಿನ್ನುವ ಆಹಾರ ಸುರಕ್ಷಿತವೇ?

0 min read
  • ಪುಡ್‌ ಪಾಯ್ಸಿನ್‌ನಿಂದ ಆಸ್ಪತ್ರೆ ಸೇರುತ್ತಿದ್ದಾರೆ ಮಕ್ಕಳು
  • ಕೇವಲ ಪರೀಕ್ಷೆಗಳಿಗಷ್ಟೆ ಸೀಮಿತವಾದ ಫುಡ್‌ ಸೆಫ್ಟಿ ಇಲಾಖೆ
  • ಮನೆಯಿಂದ ಹೊರಗಡೆ ಮಕ್ಕಳು ಕಾಲಿಡುವ ಮುನ್ನ ಸಾಕಷ್ಟು ಮುನ್ನೆಚರಿಕಾ ಕ್ರಮಗಳ ಅಗತ್ಯತೆ ಹೆಚ್ಚಿದೆ

ರಾಮನಗರ : ಈಗ ಎಲ್ಲೆಡೆ ಬಿರು ಬೇಸಿಗೆ. ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿಯಲ್ಲಿ ಮಕ್ಕಳ ಮೇಲೆ ಸಾಕಷ್ಟು ನಿಗಾ ವಹಿಸಬೇಕಿದೆ. ಕಳೆದೆರೆಡು ದಿನಗಳ ಅಂತರದಲ್ಲಿ ವಿವಿಧ ಕಾರ‍್ಯಕ್ರಮಗಳಲ್ಲಿ ಊಟ ಸೇವಿಸಿದ್ದ ಅನೇಕ ಮಕ್ಕಳು ಆಸ್ಪತ್ರೆ ಸೇರಿದ್ದಾರೆ.

ಈಗೆಲ್ಲ ಫುಡ್‌ಪಾಯ್ಸಿನ್‌ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಮನೆಯಿಂದ ಹೊರಗಡೆ ಮಕ್ಕಳು ಕಾಲಿಡುವ ಮುನ್ನವೇ ಸಾಕಷ್ಟು ಮುನ್ನೆಚರಿಕಾ ಕ್ರಮಗಳ ಅಗತ್ಯತೆ ಹೆಚ್ಚಿದೆ. ಇದೆಲ್ಲದರ ನಡುವೆ, ಫುಡ್‌ಕಲರ್‌ಗಳ ಬಳಕೆ, ಕಳಪೆ ಗುಣಮಟ್ಟದ ವಾಟರ್‌ ಬಾಟಲ್‌ಗಳು, ಹೆಸರೇ ತಿಳಿಯದ ಐಸ್‌ಕ್ರೀಂ, ಜ್ಯೂಸ್‌ ಮಾರಾಟ….ಹೀಗೆ ಸಾಕಷ್ಟು ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಗಪ್‌ಚುಪ್‌ ಎನ್ನುತ್ತಿಲ್ಲ.

ಭಾನುವಾರವಷ್ಟೆ ಚನ್ನಪಟ್ಟಣದಲ್ಲಿ ನಡೆದ ಮದುವೆ ಕಾರ‍್ಯಕ್ರಮಯೊಂದರಲ್ಲಿ ಐಸ್‌ ಕ್ರೀಂ ಸೇವಿಸಿದ್ದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಸೋಮವಾರ ರಾಮನಗರದ ಜೈಪುರ ಗ್ರಾಮದಲ್ಲಿ ನಡೆದ ಮದುವೆ ಕಾರ‍್ಯಕ್ರದಲ್ಲಿ ಊಟ ಸೇವಿಸಿದ್ದ 22ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದೇ ಮಾದರಿಯಲ್ಲಿಅನೇಕ ಮಕ್ಕಳು ಆಸ್ಪತ್ರೆಗೆ ಸೇರುತ್ತಿರುವುದು ಹೆಚ್ಚಾಗುತ್ತಲೇ ಇದೆ. ಈ ಹಿಂದೆ ಬಿಸಿಯೂಟ ಸೇವಿಸಿ ಅನೇಕ ಮಕ್ಕಳು ಅಸ್ವಸ್ಥಗೊಂಡಿದ್ದರು. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿಮಕ್ಕಳೇ ಅಧಿಕ ಸಂಖ್ಯೆಯಲ್ಲಿರುವುದು ಸಹ ಚಿಂತೆಗೀಡು ಮಾಡಿದೆ. ಬೇಸಿಗೆ ಕಾಲದಲ್ಲಿಮಾಡಿದ ಊಟವೇ ಜಿರ್ಣವಾಗುವುದು ಕಷ್ಟ. ಇಂತಹದರಲ್ಲಿಕಾರ‍್ಯಕ್ರಮಗಳಲ್ಲಿಊಟ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅದರಲ್ಲೂ ಫುಡ್‌ಕಲರ್‌ಗಳು, ಕುಡಿಯುವ ನೀರು ವಾಂತಿ, ಭೇದಿಗೆ ಕಾಧಿರಧಿಣಧಿವಾಧಿಗಿದೆ ಎಧಿನ್ನುತ್ತಾರೆ ವೈದ್ಯರು.

ದಾಳಿಗಳು ನಡೆದೇ ಇಲ್ಲ:

ಕೇವಲ ಹೆಸರಿಗಷ್ಟೇ ಇರುವ ಆಹಾರ ಸುರಕ್ಷತಾ ಇಲಾಖೆ(ಫುಡ್‌ಸೆಫ್ಟಿ)ಯು ಈ ವರೆಗೂ ದಾಳಿ ನಡೆಸಿರುವುದೇ ಅಪರೂಪ. ವರ್ಷಕ್ಕೊಮ್ಮೆಯೂ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ಇತಿಹಾಸಗಳೇ ಇಲ್ಲ. ಇದರೊಂದಿಗೆ ಇತ್ತಿಚೆಗಷ್ಟೆ ರಾಜ್ಯ ಸರಕಾರ ಕಲರ್‌ ಬಳಸಿದ ಗೋಬಿ ಮಂಚೂರಿಯನ್ನು ನಿಷೇಧಿಸಿದೆ. ಆದರೆ, ಈ ಬಗ್ಗೆಯು ಫುಡ್‌ಸೆಫ್ಟಿ ಇಲಾಖೆ ಕ್ರಮ ಕೈಗೊಂಡ ದಾಖಲೆಗಳೇ ಇಲ್ಲ.

ಇದರೊಂದಿಗೆ ಯಾವುದೇ ಸಮಾರಂಭಗಳಲ್ಲಿ ನೀಡಲಾಗುವ ನೀರಿನ ಬಾಟಲಿಗಳೆಲ್ಲವು ಕಳಪೆ ಗುಣಮಟ್ಟದ್ದೆ ಆಗಿವೆ. ದೊಡ್ಡಕಂಪನಿಗಳ ಹೆಸರನ್ನೇ ಹೋಲುವ ಈ ನಕಲಿ ಕಂಪನಿಗಳು ನೀರಿನ ದರವನ್ನು ಅತ್ಯಂತ ಕಡಿಮೆ ಮಾಡಿವೆ. ಜತೆಗೆ ನೀರಿನ ಬಾಟಲಿಗೆ ಎಕ್ಸ್‌ಪೈರಿ ದಿನಾಂಕ ಸಹ ಪ್ರಕಟಿಸುವುದಿಲ್ಲ. ಇಂತಹ ನಕಲಿ ನೀರಿನ ಜಾಲಗಳ ಬಗ್ಗೆ ಇಲಾಖೆ ಜಾಣ ಕುರುಡರಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

You May Also Like

More From Author

+ There are no comments

Add yours