ಪವಿತ್ರಾ- ಚಂದ್ರು ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದರು, ಆಕೆ ಬಂದ ಮೇಲೆ ನನ್ನ ಜೀವನ ಹಾಳಾಯ್ತು: ಚಂದ್ರಕಾಂತ್ ಪತ್ನಿ!

1 min read

ನಟಿ ಪವಿತ್ರಾ ಜಯರಾಂ ಅವರು ನಿಧನ ಹೊಂದಿದ ಬೆನ್ನಲ್ಲೇ ಅವರ ಗೆಳೆಯ ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ತಮ್ಮ ಪತಿ ಸಾವಿನ ಬಗ್ಗೆ ಮಾತನಾಡಿರುವ ಕಿರುತೆರೆ ನಟ ಚಂದು ಪತ್ನಿ ಶಿಲ್ಪಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಚಂದು ಹಾಗೂ ಪವಿತ್ರಾ ಅವರ ಸ್ನೇಹ ಬರೀ ಸ್ನೇಹವಾಗಿಲ್ಲ. ಅವರಿಬ್ಬರು ತುಂಬಾ ಆತ್ಮೀಯರಾಗಿದ್ದರು. ಇಬ್ಬರು ಗಂಡ – ಹೆಂಡತಿಯಂತೆ ಇದ್ದರು ಎಂದು ಚಂದು ಪತ್ನಿ ಶಿಲ್ಪಾ ತಿಳಿಸಿದ್ದಾರೆ. ನಾನು, ನನ್ನ ಗಂಡ ತುಂಬ ಚೆನ್ನಾಗಿದ್ದೆವು. ಪವಿತ್ರಾ ಬಂದಮೇಲೆ ಎಲ್ಲ ಹಾಳಾಯ್ತು. ನನಗೆ 4 ವರ್ಷದ ಒಂದು ಮಗು, 8 ವರ್ಷದ ಒಂದು ಮಗು ಇದೆ. ಮೊದಲೆಲ್ಲ ಚಂದು ಮಕ್ಕಳನ್ನು ನೋಡದೆ ಇರುತ್ತಿರಲಿಲ್ಲ. ಚಂದ್ರಕಾಂತ್ ಜೀವನಕ್ಕೆ ಪವಿತ್ರಾ ಬಂದಮೇಲೆ ಅವರು ಮನೆಗೆ ಬರೋದು ಅಪರೂಪ ಆಗಿತ್ತು. ಪವಿತ್ರಾ ಜಯರಾಮ್ ಅವರು ಸಾಯುವ 4 ದಿನದ ಮುಂಚೆ ಚಂದ್ರಕಾಂತ್ ಜೊತೆ ಊಟಿಗೆ ಹೋಗಿದ್ದರು. ಅಲ್ಲಿ ಅವರು ರೀಲ್ಸ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು ಎಂದು ಶಿಲ್ಪಾ ಹೇಳಿದ್ದಾರೆ.

2004ರಲ್ಲಿ ನನಗೂ ಚಂದ್ರಕಾಂತ್​ಗು ಪರಿಚಯವಾಯ್ತು. ಅಲ್ಲಿಂದಲೂ ನಾವು ಇಷ್ಟಪಡ್ತಿದ್ದೀವಿ. ಆದರೆ ಮನೆಯವರು ಒಪ್ಪಿಗೆ ಕೊಟ್ಟಿರಲಿಲ್ಲ. ಆಮೇಲೆ ಡಿಮ್ಯಾಂಡ್​ ಮಾಡಿ ಮದುವೆ ಆಗಿದ್ದೆ. ತುಂಬಾ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೀಗ ನನಗೆ 8 ವರ್ಷದ ಮಗಳು ಮತ್ತು 4 ವರ್ಷ ಮಗ ಇದ್ದಾನೆ. ಚಂದು ಆಗಾಗ ಬಂದು ಮಕ್ಕಳನ್ನ ನೋಡ್ಕೊಂಡು ಹೋಗ್ತಿದ್ದ. ಲಾಕ್​ಡೌನ್​ ಆದ್ಮೇಲೆ ಚಂದು-ಪವಿತ್ರಾ ರಿಲೇಶನ್​ಷಿಪ್ ಆರಂಭವಾಯ್ತು. ಇವರ ಸಂಬಂಧ ಶುರುವಾದ್ಮೇಲೆ ನನ್ನ ಮೇಲೆ ದೌರ್ಜನ್ಯ ನಡೆಸಿದ್ದರು. ಯಾವಾಗಲೂ ನಿಂದಿಸಿ, ಹಲ್ಲೆ ಮಾಡಿದ್ದಾರೆ. ನನ್ನ ಗಂಡನೇ ಸರ್ವಸ್ವ ಎಂದು ಬದುಕಿದ್ದೆ. ಇವತ್ತು ನನ್ನ ಬಿಟ್ಟು ಹೋದ ಎಂದಿದ್ದಾರೆ.

You May Also Like

More From Author

+ There are no comments

Add yours