ವಿಜಯಪುರ : ಬಿಟ್ಟು ಹೋಗಿದ್ದ ಮೊಬೈಲ್‌ನ್ನು ಮರಳಿ ವಿದ್ಯಾರ್ಥಿನಿಗೆ

0 min read

ವಿಜಯಪುರ : ಆಟೋದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್‌ನ್ನು ಮರಳಿ ವಿದ್ಯಾರ್ಥಿನಿಗೆ ನೀಡಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ಸರ್ಕಲ್‌‌ನಲ್ಲಿ ನಡೆದಿದೆ. ಆಟೋದಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿನಿ ಬೆಲೆಬಾಳುವ ಮೊಬೈಲ್‌ನ್ನು ಆಟೋದಲ್ಲಿ ಬಿಟ್ಟು ಹೋಗಿದ್ದಾಳೆ. ಅದಕ್ಕಾಗಿ ಆಟೋ ಚಾಲಕ ಸಲ್ಮಾನ್ ಶೇಖ್ ಮೊಬೈಲ್‌ನ್ನು ಸಂಚಾರಿ ಪೊಲೀಸ ಠಾಣೆಯ ಎಎಸ್‌ಐ ಶಿವಾನಂದ ಕಟ್ಟಿಮನಿಗೆ ಮರಳಿ ನೀಡಿದ್ದಾರೆ. ತದನಂತರ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ ಮೊಬೈಲ್ ಮರಳಿ ನೀಡಿದ್ದಾರೆ. ಅಲ್ಲದೇ, ಆಟೋ ಚಾಲಕ ಸಲ್ಮಾನ್ ಶೇಖ್‌ಗೆ ಪೊಲೀಸರು ಸನ್ಮಾನಿಸಿ ಗೌರವಿಸಿದ್ದಾರೆ.

You May Also Like

More From Author

+ There are no comments

Add yours