ಮನರೇಗಾ ಉದ್ಯೋಗಕ್ಕೆ ಬೇಡಿಕೆ; ಕೂಲಿ ಕಾರ್ಮಿಕರಿಗೆ ತಪ್ಪಲಿದೆ ವಲಸೆ

1 min read

ಹೈಲೈಟ್ಸ್‌:

  • ಮನರೇಗಾ ಉದ್ಯೋಗಕ್ಕಾಗಿ ಯಳಂದೂರು ತಾಲೂಕಿನಲ್ಲಿ ಸಾಕಷ್ಟು ಬೇಡಿಕೆ
  • ಮನರೇಗಾ ಕಾಮಗಾರಿಗಳಲ್ಲಿ ದುಡಿಯಲು ನೂರಾರು ಮಂದಿ ಕಾಯುವಂತಹ ಪರಿಸ್ಥಿತಿ ನಿರ್ಮಾಣ
  • ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕೂಲಿ ನೀಡಿದರೆ ಕಾರ್ಮಿಕರ ವಲಸೆ ತಪ್ಪಲಿದೆ

ಯಳಂದೂರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ನೀಡುವ ಉದ್ಯೋಗಕ್ಕಾಗಿ ಯಳಂದೂರು ತಾಲೂಕಿನಲ್ಲಿ ಸಾಕಷ್ಟು ಬೇಡಿಕೆ ಏರ್ಪಟ್ಟಿದೆ.

ಕಳೆದ ವರ್ಷವೆಲ್ಲಾ ಮಳೆ ಇಲ್ಲದೇ ಯಾವುದೇ ಬೆಳೆ ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಹಾಗೂ ಕೃಷಿ ಕಾರ್ಮಿಕರಿಗೆ ಸಾಕಷ್ಟು ನಷ್ಟವಾಗಿದೆ. ಈ ಕಾರಣಕ್ಕೆ ಅವರೆಲ್ಲರೂ ಉದ್ಯೋಗ ಅರಸಿ ವಲಸೆ ಹೋಗುವಂತಾಗಿತ್ತು. ಇಂಥ ಸಂದರ್ಭದಲ್ಲಿಇದೀಗ ಮಳೆಯಾಗಿದೆ. ಆದರೆ, ಕಾರ್ಮಿಕರಿಗೆ ಇನ್ನು ನಿರೀಕ್ಷಿತ ಮಟ್ಟದಲ್ಲಿಉದ್ಯೋಗ ದೊರೆಯುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾಗುವ ಮನರೇಗಾ ಕಾಮಗಾರಿಗಳಲ್ಲಿ ದುಡಿಯಲು ನೂರಾರು ಮಂದಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಕಾಮಗಾರಿ ಯೋಜನೆಯಲ್ಲಿ ಕೂಲಿ ನೀಡಿ ವರ್ಷಗಳೇ ಕಳೆದಿತ್ತು. ಆದ್ದರಿಂದ ಉದ್ಯೋಗಕ್ಕಾಗಿ ಜನರು ಬೇಸತ್ತು ವಲಸೆ ಹೋಗುವಂತಾಗಿತ್ತು. ಆದರೆ ಮೇ 24 ಶುಕ್ರವಾರದಂದು ಗ್ರಾಮ ಪಂಚಾಯಿತಿ ಉದ್ಯೋಗ ನೀಡಲು ಮುಂದಾಗಿರುವುದರಿಂದ ಕಾರ್ಮಿಕರು ಕಾದು ನಿಂತಿದ್ದರು.

ಇದೇ ರೀತಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕೂಲಿ ನೀಡಿದರೆ ಜನರು ಕೂಲಿಗಾಗಿ ವಲಸೆ ಹೋಗುವುದು ತಪ್ಪಲಿದೆ. ಒಂದು ದಿನಕ್ಕೆ 349 ರೂ. ಗಳನ್ನು ಈ ಯೋಜನೆಯಡಿಯಲ್ಲಿ ನೀಡುತ್ತಾರೆ. ಅದರಂತೆ ವರ್ಷದಲ್ಲಿ 100 ದಿನಗಳು ಕೂಲಿ ನೀಡಿದರೆ ಗ್ರಾಮೀಣ ಭಾಗದ ಬಡ ಜನರು ತಮ್ಮ ಕುಟುಂಬ ನಿರ್ವಹಣೆ ಅನುಕೂಲವಾಗಲಿದೆ. ಹಾಗಾಗಿ ಮನರೇಗಾ ಯೋಜನೆ ಸಮರ್ಪಕವಾಗಿ ಎಲ್ಲೆಡೆ ಜಾರಿಯಾಗಲಿ ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ವಾಮ ಮಾರ್ಗವೂ ಉಂಟು

ಇದೇ ಮನರೇಗಾ ಕಾಮಗಾರಿಗಳಲ್ಲಿ ಬೆಳಗಿನ ವೇಳೆ ಆಟೋ ರಿಕ್ಷಾಗಳಲ್ಲಿ 8 ರಿಂದ 10 ಮಂದಿ ಕೂಲಿ ಕಾರ್ಮಿಕರನ್ನು ಕೂರಿಸಿಕೊಂಡು ಹೋಗಿ, ಅವರಿಂದ ಕೆಲಸ ಮಾಡಿಸುವ ರೀತಿಯಲ್ಲಿ ಫೋಟೋ ತೆಗೆದು 100 ರೂ.ಗಳನ್ನು ಕೊಟ್ಟು ವಾಪಸ್‌ ಆಟೋರಿಕ್ಷಾದಲ್ಲಿ ಕಳುಹಿಸಲಾಗುತ್ತದೆ. ಇದರಿಂದ ಕೂಲಿ ಕಾರ್ಮಿಕರಿಗೆ ಸಿಗಬೇಕಾದ 349 ರೂ. ಕೂಲಿ ಹಣದಲ್ಲಿ ಬರಿ 100 ರೂ. ಮಾತ್ರ ಸಿಗುತ್ತಿದೆ.

ಕಾರ್ಮಿಕರ ಕೆಲಸವನ್ನು ಯಂತ್ರದಿಂದ ಮಾಡಿಸಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ದೊರೆಯಬೇಕಾದ ಹಣವನ್ನು ಲಪಟಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕೆಲ ಗ್ರಾಮ ಪಂಚಾಯಿತಿಗಳಲ್ಲಿಎನ್‌ಎಂಆರ್‌ ತೆಗೆಯಬೇಕಾದರೆ ಗ್ರಾ.ಪಂ. ಸದಸ್ಯರು ಮತ್ತು ಮಧ್ಯವರ್ತಿಗಳು, ಇನ್ನು ಕೆಲ ಪ್ರಭಾವಿಗಳು ತಾವು ಹೇಳಿದ ಕಡೆ ಎನ್‌ಎಂಆರ್‌ ತೆಗೆದುಕೊಡುತ್ತಾರೆ. ಇದರಿಂದ ಕೂಲಿ ಕಾರ್ಮಿಕರು ಕೂಲಿಗಾಗಿ ವಲಸೆ ಹೋಗುವುದು ತಪ್ಪಿಲ್ಲಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವರ್ಷದಲ್ಲಿ 100 ದಿನಗಳು ಕೂಲಿ ಕೆಲಸ ನೀಡಬೇಕು. ಆದರೆ ಗ್ರಾಮ ಪಂಚಾಯಿತಿಯವರು ವರ್ಷದಲ್ಲಿ 15 ರಿಂದ 20 ದಿನಗಳು ಕೆಲಸ ಕೊಡುವುದೇ ಕಷ್ಟ. ಆದ್ದರಿಂದ ಉದ್ಯೋಗಕ್ಕೆ ವಲಸೆ ಹೋಗಬೇಕಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಾಗಿದೆ.

-ಮಲ್ಲಿಕಾರ್ಜುನ, ಕಾರ್ಮಿಕ

ಮಧ್ಯವರ್ತಿಗಳು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಫೋಟೊ ತೆಗೆಸಿ 100 ರೂ. ಕೊಟ್ಟು ಕಳುಹಿಸುತ್ತಾರೆ ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ. ಆದರೆ ಎಲ್ಲೆಲ್ಲಿಉದ್ಯೋಗ ಖಾತಧಿರಿ ಕಾಮಗಾರಿ ನಡೆಯುತ್ತಿದೆ ಆಯಾ ಸ್ಥಳಕ್ಕೆ ಎಂಜಿನಿಯರ್‌ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲನೆ ಮಾಡಲಾಗುವುದು.

-ಉಮೇಶ್‌, ತಾ.ಪಂ. ಇಒ, ಯಳಂದೂರು

You May Also Like

More From Author

+ There are no comments

Add yours