ಹೈಲೈಟ್ಸ್:
- ಬಿಜೆಪಿ ಮತ್ತು ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಇಂದು ರಾಮನಗರಕ್ಕೆ ಎಂಟ್ರಿ
- ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ವಾಗ್ದಾಳಿ
- ನಿಮ್ಮ ಹಗರಣಗಳ ತನಿಖೆಗೆ ಒಂದು ಸಿಬಿಐ, ಇಡಿ ಸಾಕಾಗುವುದೇ ಇಲ್ಲ ಎಂದು ವಾಗ್ದಾಳಿ
ಬೆಂಗಳೂರು: ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಪಾದಯಾತ್ರೆ ರಾಮನಗರಕ್ಕೆ ಕಾಲಿಟ್ಟಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ ನೀಡಿತ್ತು. ರಾಮನಗರದ ಜಿಲ್ಲೆಯ ಹೆಸರು ಬದಲಾವಣೆ ವಿಚಾರವನ್ನು ಮುಂದಿಟ್ಟುಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಲು ಜೆಡಿ ಎಸ್ ತಂತ್ರಗಾರಿಕೆಯನ್ನು ಮಾಡಿಕೊಂಡಿದೆ.
ಬಿಜೆಪಿ ಜೆಡಿ ಎಸ್ ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ಡಿಸಿಎಂ ಡಿಕೆಶಿಗೂ ಟಾಂಗ್ ಕೊಡಲು ಕೇಂದ್ರ ಸಚಿವ ಎಚ್ ಡಿ ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಅಸ್ಮಿತೆಯನ್ನು ಕಳೆದುಕೊಂಡಂತಾಗಿದೆ ಎಂಬುದು ಜೆಡಿಎಸ್ ವಾದವಾಗಿದೆ.
ಭಾನುವಾರ ಪಾದಯಾತ್ರೆ ಅಂತ್ಯದ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಭಾಗಿಯಾಗುವ ಸಾಧ್ಯತೆ ಇದೆ. ರಾಮನಗರ ಹೆಸರು ಬದಲಾವಣೆ ವಿಚಾರವನ್ನು ಎಚ್ ಡಿ ಕುಮಾರಸ್ವಾಮಿ ಅವರು ಪ್ರಸ್ತಾಪಿಸುವ ಸಾಧ್ಯತೆ ಇದೆ.ಪಾದಯಾತ್ರೆ ವೇಳೆ ತಮ್ಮ ಕರ್ಮಭೂಮಿ ರಾಮನಗರದಲ್ಲಿ ಎಚ್ಡಿಕೆ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಗಮನ ಸೆಳೆಯುವ ಪ್ರಯತ್ನ ನಡೆಸಲಿರುವ ಸಾಧ್ಯತೆ ಇದೆ. ಎರಡು ದಿನ ರಾಮನಗರದಲ್ಲಿ ಪಾದಯಾತ್ರೆ ಸಾಗಲಿರುವುದರಿಂದ
ಪಾದಯಾತ್ರೆ ಉದ್ದಕ್ಕೂ ರಾಮನಗರ ಅಸ್ಮಿತೆ ಎತ್ತಿಹಿಡಿಯಲು ಎಚ್ ಡಿಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಮನಗರದಲ್ಲೇ ಡಿಕೆಶಿಗೆ ಉತ್ತರ
ದೇವೆಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಎಂಬ ಡಿಸಿಎಂ ಪ್ರಶ್ನೆಗೆ ಬಿಡದಿ, ರಾಮನಗರದಲ್ಲೇ ಉತ್ತರಿಸುತ್ತೇನೆ. ಹಾಗೆಯೇ ಅವರ ಆಸ್ತಿ ಬಗ್ಗೂ ಹೇಳುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
+ There are no comments
Add yours