ಹೈಲೈಟ್ಸ್:
- ನ. 3ರಂದು ಹಾಸನಾಂಬ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭೇಟಿ.
- ಮಾಜಿ ಪ್ರಧಾನಿಯವರಿಗೆ ಅವರ ಪತ್ನಿ ಚೆನ್ನಮ್ಮ, ಪುತ್ರಿಯರು ಹಾಗೂ ಕುಟುಂಬದ ಇತರ ಸದಸ್ಯರು ಸಾಥ್.
- ವ್ಹೀಲ್ ಚೇರ್ ನಲ್ಲಿ ಆಗಮಿಸಿದ ಮಾಜಿ ಪ್ರಧಾನಿಯವರಿಗೆ ಜಿಲ್ಲಾಡಳಿತದಿಂದ ಭವ್ಯ ಸ್ವಾಗತ.
- ನ. 2ರಿಂದ 15ರವರೆಗೆ ಹಾಸನಾಂಬ ದೇವಿಯ ದರ್ಶನ ಇರಲಿದೆ.
ಹಾಸನ: ಹಾಸನಾಂಬ ದೇವಾಲಯಕ್ಕೆ ವ್ಹೀಲ್ ಚೇರ್ ನಲ್ಲಿ ಬಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಪತ್ನಿ ಚನ್ನಮ್ಮ , ಪುತ್ರಿಯರು ಮತ್ತು ಜಿಲ್ಲಾಡಳಿತ ಸಾಥ್ ನೀಡಿದರು. ಜಿಲ್ಲಾಡಳಿತದಿಂದ ಮಾಜಿ ಪ್ರಧಾನಿಯವರಿಗೆ ಸ್ವಾಗತ ಕೋರಲಾಯಿತು.
ದೇವಸ್ಥಾನದ ಬಳಿಗೆ ವಾಹನಗಳ ಪ್ರವೇಶ ಇರದಿದ್ದರಿಂದ ದೇವಸ್ಥಾನದ ಅನತಿ ದೂರದಲ್ಲೇ ದೇವೇಗೌಡರು ಹಾಗೂ ಅವರ ಕುಟುಂಬದವರು ಕಾರಿನಿಂದ ಇಳಿದರು. ಕೂಡಲೇ ದೇವೇಗೌಡರಿಗೆ ಾಹಗೂ ಚೆನ್ನಮ್ಮನವರಿಗೆ ವ್ಹೀಲ್ ಚೇರ್ ತಂದು ನೀಡಲಾಯಿತು. ಬಿಸಿಲು ಪ್ರಖರವಾಗಿದ್ದಿದ್ದರಿಂದ ದೇವೇಗೌಡರಿಗೆ ಹಾಗೂ ಚೆನ್ನಮ್ಮನವರಿಗೆ ಬಿಸಲಿನಿಂದ ರಕ್ಷಿಸಲು ಸಾಂಪ್ರದಾಯಿಕ ಛತ್ರಿಗಳನ್ನು ಹಿಡಿಯಲಾಗಿತ್ತು.
ದೇವಸ್ಥಾನದವರೆಗೆ ಹಾಗೆಯೇ ಹೋದ ದೇವೇಗೌಡರು ಹಾಗೂ ಅವರ ಪತ್ನಿಯವರನ್ನು ನಿಧಾನವಾಗಿ ವ್ಹೀಲ್ ಚೇರ್ ನಿಂದ ಎಬ್ಬಿಸಿಕೊಂಡು, ಹುಷಾರಾಗಿ ನಡೆಯಿಸುತ್ತಾ ದೇವಸ್ಥಾನದೊಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ದೇವರ ದರ್ಶನ ಪಡೆದ ಅವರು, ವಿಶೇಷ ಪೂಜೆಯನ್ನು ನೆರವೇರಿಸಿದರು.
ಪತ್ನಿ ಚೆನ್ನಮ್ಮನವರೊಂದಿಗೆ ಆಗಮಿಸಿದ ದೇವೇಗೌಡರನ್ನು ನೋಡಲು ಭಕ್ತಾದಿಗಳು ಸಹ ಮುಗಿಬಿದ್ದರು. ಅನೇಕರು ದೇವೇಗೌಡರ ಬಳಿಗೆ ತೆರಳಲು ಪ್ರಯತ್ನಪಟ್ಟರಾದರೂ ಅವರನ್ನು ಪೊಲೀಸರು ಬಿಡಲಿಲ್ಲ. ಅತ್ತ, ದೇವೇಗೌಡರು ತಮ್ಮ ಅಭಿಮಾನಿಗಳಿಗೆ ದೂರದಿಂದಲೇ ಹಸನ್ಮುಖದಿಂದ ನಮಸ್ಕರಿಸಿದರು.

ಹಾನಸಾಂಬ ದೇವಸ್ಥಾನದೊಳಕ್ಕೆ ಹೋಗುವಾಗ ದೇವೇಗೌಡರನ್ನು ನಿಧಾನವಾಗಿ ಕರೆದೊಯ್ಯಲಾಯಿತು.
ವರ್ಷಪೂರ್ತಿ ಆರದ ದೀಪದ ಮಹಿಮೆಯ ಶಕ್ತಿದೇವತೆ ಹಾಸನಾಂಬ ದೇಗುಲದ ಬಾಗಿಲು ಸಾಂಪ್ರದಾಯಿಕ, ವಿಧಿ, ವಿಧಾನ ಆಚರಣೆ ಬಳಿಕ ಗುರುವಾರ (ನ. 2) ಮಧ್ಯಾಹ್ನ 12.14ಕ್ಕೆ ತೆರೆದು ವಿಶ್ವರೂಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನ.2ರಿಂದ ನ.15ರವರೆಗೆ ದೇಗುಲ ಬಾಗಿಲು ತೆರೆದಿರುತ್ತಾದೆಯಾದರೂ, ಪ್ರಥಮ ದಿನ ಹಾಗೂ ಅಂತಿಮ ದಿನವಾದ ನ.15ರಂದು ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ದೇವೇಗೌಡರ ಪತ್ನಿ ಚೆನ್ನಮ್ಮನವರನ್ನು ದೇವಸ್ಥಾನದೊಳಕ್ಕೆ ನಿಧಾನವಾಗಿ ಕರೆದೊಯ್ಯಲಾಯಿತು.
ಹಿಂದಿನ ವರ್ಷ ಗರ್ಭಗುಡಿಗೆ ಹಾಕಿದ್ದ ಬೀಗಮುದ್ರೆಯನ್ನು ಮಧ್ಯಾಹ್ನ 12.14ಕ್ಕೆ ದೇವಾಲಯದ ಬಾಗಿಲನ್ನು ಆದಿಚುಂಚನಗಿರಿ ಮಧಿಠಧಿದ ಶ್ರೀನಿರ್ಮಲನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಜಿಲ್ಲಾಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಸತ್ಯಭಾಮ ಮತ್ತಿತರರ ಸಮ್ಮುಖದಲ್ಲಿಪೂಜಾ ವಿಧಿ, ವಿಧಾನ ಪೂರೈಸಿ ಬಾಳೆಗೆ ಕಟ್ಟಿದ್ದ ಬನ್ನಿಯನ್ನು ಕಡಿದ ಕೂಡಲೇ ದೇವಿಯ ಗರ್ಭಗುಡಿ ಬಾಗಿಲಿ ಬೀಗಮುದ್ರೆ ತೆರವುಗೊಳಿಸಲಾಯಿತು. ನ್ಯಾಯಾಧೀಶರು, ಆಹ್ವಾನಿತ ಗಣ್ಯರು, ಅಧಿಕಾರಿ ವರ್ಗ ದರ್ಶನ ಪಡೆದರು. ಪ್ರಥಮ ದಿನ ಸಾರ್ವಜನಿಕ ದರ್ಶನವಿಲ್ಲಎಂದು ತಿಳಿಸಿದ್ದರೂ ನೂರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಹಾಸನ ಜಿಲ್ಲಾಉಸ್ತುವಾರಿ ಸಚಿವನಾಗಿ ಹಾಸನಾಂಬೆ ದರ್ಶನವನ್ನು ಪಡೆದಿದ್ದೇನೆ. ಹಿಂದಿನ ವರ್ಷ ಹಚ್ಚಿದ್ದ ದೀಪ ಉರಿಯುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ಹೂವೂ ಬಾಡಿರಲಿಲ್ಲ, ಇದೆಲ್ಲಆ ತಾಯಿಯ ಮಹಿಮೆ. ಈ ಬಾರಿ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ. ಅದಕ್ಕೆ ಎಲ್ಲಅಗತ್ಯ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
+ There are no comments
Add yours