ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನನಾಗಿ ಸ್ವಲ್ಪ ದಿನಗಳಷ್ಟೇ ಕಳೆದಿದೆ. ಬಾಲಕ ರಾಮನ ಮೂರ್ತಿ ನಿರ್ಮಿಸಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಮುದ್ದು ಬಾಲಕನನ್ನು ಹೋಲುವ ಮೂರ್ತಿ ಅತ್ಯಂತ ಆಕರ್ಷಕವಾಗಿತ್ತು. ಇದೀಗ ಅದೇ ಶ್ರೀರಾಮನನ್ನು ಹೋಲುವ ಪುರಾತನ ವಿಷ್ಣು ಮೂರ್ತಿಯೊಂದು ಪತ್ತೆಯಾಗಿದೆ!

ಹೌದು, ರಾಯಚೂರು ಜಿಲ್ಲೆಯ ದೇವಸೂಗುರು ಬಳಿಯ ಕೃಷ್ಣಾ ನದಿಯಲ್ಲಿ ಪುರಾತನ ಮೂರ್ತಿಗಳು ಪತ್ತೆಯಾಗಿವೆ. ಸೇತುವೆ ಕಾಮಗಾರಿ ನಡೆಯುತ್ತಿದ್ದಾಗ ಈ ವಿಸ್ಮಯ ಎದುರಾಗಿದೆ.

ವಿಷ್ಣುವಿನ ಮೂರ್ತಿಯೊಂದು ನದಿಯೊಳಗೆ ಪತ್ತೆಯಾಗಿದೆ. ಇದು ಪ್ರಾಚೀನ ಮೂರ್ತಿಯಾಗಿದ್ದು, ಇತ್ತೀಚಿಗೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮನ ಮೂರ್ತಿಯನ್ನು ಹೋಲುತ್ತದೆ.

ಅಯೋಧ್ಯೆಯಲ್ಲಿ ಬಾಲಕ ರಾಮ ನಿಂತ ಭಂಗಿಯಲ್ಲಿದ್ದು, 2 ಕೈಗಳಿದ್ದು, ಒಂದರಲ್ಲಿ ಬಿಲ್ಲು, ಮತ್ತೊಂದರಲ್ಲಿ ಬಾಣ ಹಿಡಿದಿದ್ದ.

ಇನ್ನು ಶ್ರೀರಾಮನ ಸುತ್ತ ಶ್ರೀ ಮಹಾವಿಷ್ಣುವಿನ ದಶಾವತಾರದ ಚಿಕ್ಕ ವಿಗ್ರಹಗಳನ್ನು ಕೆತ್ತಲಾಗಿತ್ತು.

ಇದೀಗ ಕೃಷ್ಣಾ ನದಿಯಲ್ಲಿ ಸಿಕ್ಕ ವಿಷ್ಣುವಿನ ವಿಗ್ರಹವೂ ಅದಕ್ಕೆ ಹೋಲಿಕೆಯಾಗುತ್ತಿದೆ. ಈ ವಿಗ್ರಹದ ಮೇಲೂ ದಶಾವತಾರದ ಶಿಲ್ಪಗಳಿವೆ.

ಇನ್ನು ನದಿಯಲ್ಲಿ ಶಿವ ಲಿಂಗ ಕೂಡ ಸಿಕ್ಕಿದೆ. ವಿಗ್ರಹಗಳನ್ನು ಸುರಕ್ಷಿತವಾಗಿ ನದಿಯಿಂದ ಸಿಬ್ಬಂದಿ ಹೊರತೆಗೆದಿದ್ದು, ಕೂಡಲೇ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.
+ There are no comments
Add yours