ಹೈಲೈಟ್ಸ್:
- ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಅನೌನ್ಸ್.
- ಮೈಸೂರು – ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಬದಲು ಯದುವೀರ್ ಒಡೆಯರ್ ಗೆ ಟಿಕೆಟ್.
- ಬೆಂಗಳೂರು ಗ್ರಾಮಾಂತರದಿಂದ ಡಾ. ಸಿಎನ್ ಬಾಲಕೃಷ್ಣ, ಹಾವೇರಿಯಿಂದ ಬೊಮ್ಮಾಯಿ ಕಣಕ್ಕೆ.
ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಇತ್ತೀಚೆಗಷ್ಟೇ ನಾನಾ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಜೆಪಿ ಹೈಕಮಾಂಡ್, ಮಾ. 13ರಂದು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಟಿಕೆಟ್ ನಿಂದ ವಂಚಿತರಾದವರಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿಯ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದಾರೆ. ಆದರೆ, ಸಿದ್ದೇಶ್ವರ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಲಾಗಿದೆ.
ಪಟ್ಟಿಯ ವಿಶೇಷವೇನೆಂದರೆ, ಬೆಂಗಳೂರು ಗ್ರಾಮಾಂತರದಿಂದ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ನೀಡಲಾಗಿದೆ.
ಪಟ್ಟಿಯಲ್ಲಿ ಯಾರಿದ್ದಾರೆ?
ಚಿಕ್ಕೋಡಿ | ಅಣ್ಣಾಸಾಹೇಬ್ ಜೊಲ್ಲೆ |
ಬಾಗಲಕೋಟೆ | ಪಿಸಿ ಗಡ್ಡಿ ಗೌಡರ್ |
ಬಿಜಾಪುರ | ರಮೇಶ್ ಜಿಗಜಿಣಗಿ |
ಕಲುಬರಗಿ | ಉಮೇಶ್ ಜಿ. ಜಾಧವ್ |
ಬೀದರ್ | ಭಗವಂತ್ ಖೂಬಾ |
ಕೊಪ್ಪಳ | ಬಸವರಾಜ್ ಕವಟೂರು |
ಬಳ್ಳಾರಿ | ಬಿ. ಶ್ರೀರಾಮುಲು |
ಹಾವೇರಿ | ಬಸವರಾಜ್ ಬೊಮ್ಮಾಯಿ |
ಧಾರವಾಡ | ಪ್ರಹ್ಲಾದ್ ಜೋಶಿ |
ದಾವಣಗೆರೆ | ಗಾಯತ್ರಿ ಸಿದ್ದೇಶ್ವರ |
ಶಿವಮೊಗ್ಗ | ಬಿ.ವೈ. ರಾಘವೇಂದ್ರ |
ಉಡುಪಿ – ಚಿಕ್ಕಮಗಳೂರು | ಕೋಟಾ ಶ್ರೀನಿವಾಸ ಪೂಜಾರಿ |
ದಕ್ಷಿಣ ಕನ್ನಡ | ಕ್ಯಾಪ್ಟನ್ ಬ್ರಿಜೇಶ್ ಚೌಟಾ |
ತುಮಕೂರು | ವಿ. ಸೋಮಣ್ಣ |
ಮೈಸೂರು | ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ |
ಚಾಮರಾಜನಗರ | ಎಸ್. ಬಾಲರಾಜ್ |
ಬೆಂಗಳೂರು ಗ್ರಾಮಾಂತರ | ಡಾ. ಸಿ.ಎನ್. ಮಂಜುನಾಥ್ |
ಬೆಂಗಳೂರು ಉತ್ತರ | ಶೋಭಾ ಕರಂದ್ಲಾಜೆ |
ಬೆಂಗಳೂರು ಕೇಂದ್ರ | ಪಿ.ಸಿ. ಮೋಹನ್ |
ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ |
ಯದುವೀರ್ ಗೆ ಅಭಿನಂದಿಸಿದ ಸಿಂಹ
ಮೈಸೂರು -ಕೊಡಗು ಕ್ಷೇತ್ರದಿಂದ ರಾಜಮನೆತನದ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಅದೇ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ. ಯದುವೀರ್ ಅವರಿಗೆ “Congratulations to Maharaja Sri. Yaduveer. ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. #ದೇಶಕ್ಕಾಗಿ, ಮೋದಿಗಾಗಿ” ಎಂದು ಅವರು ಎಕ್ಸ್ ಜಾಲತಾಣದಲ್ಲಿ (ಟ್ವಿಟರ್) ಹೇಳಿದ್ದಾರೆ.
+ There are no comments
Add yours