ಕಲಬುರಗಿ: ಭಿನ್ನಮತದ ನಡುವೆ ಬಿಜೆಪಿ ಪಕ್ಷ ಸೇರಿದ ನಿತಿನ್ ಗುತ್ತೇದಾರ

0 min read

ಕಲಬುರಗಿ: ಬುಧವಾರ ಬೆಂಗಳೂರಿನ ಮಲ್ಲೇಶ್ವರಂನ ಜಗನ್ನಾಥ ಭವನದ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರಾದ ವಿಜೆಯಂದ್ರ ಅವರ ಸಮ್ಮುಖದಲ್ಲಿ ಅಫಜಲಪುರ ಮತಕ್ಷೇತ್ರದ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಬಿಜೆಪಿ ಸೇರ್ಪಡೆ ಯಾಗಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಹಿರಿಯ ಸಹೋದರಾದ ಮಲ್ಲಿಕಯ್ಯ ಗುತ್ತೇದಾರ ಅವರ ಭಿನ್ನ ಮತದ ಕಾರಣ ಸಹೋದರನ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕಿಳಿದ್ದರು. ಇತ್ತೀಚೆಗಷ್ಟೇ ನಿತಿನ್ ಗುತ್ತೇದಾರಗೆ ಬಿಜೆಪಿ ಸೇರಿಸಿಕೊಳ್ಳಬಾರದೆಂದು ಮಾಲಿಕಯ್ಯ ಬೆಂಬಲಿಗರು ಪಕ್ಷದ ವರಿಷ್ಠರಿಗೆ ಆಗ್ರಹಿಸಿದರು.

ನಿತಿನ್ ಗುತ್ತೇದಾರ ಅವರಿಗೆ ಪಕ್ಷಕ್ಕೆ ಸೇರಿಸಿಕೊಂಡಿರುವುದರಿಂದ ಅಫಜಲಪುರ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನ ಚುರುಕುಗೊಂಡಿದೆ.

ಈ ಸಂದರ್ಭದಲ್ಲಿ ಸಿಟಿ ರವಿ, ಅರಾಗ ಜ್ಞಾನೇಂದ್ರ, ಕಲಬುರಗಿ ಬಿಜೆಪಿ ಪಕ್ಷದ ನಗರ ಅಧ್ಯಕ್ಷ ಚಂದು ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಿ ಸೇರಿದಂತೆ ಹಲವರು ಇದ್ದರು.

You May Also Like

More From Author

+ There are no comments

Add yours