ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ಭರ್ಜರಿ ಪೂರ್ವ ಮುಂಗಾರು (Pre Monsoon) ಮಳೆ ನಂತರ ಈಗ ಮುಂಗಾರು ಪ್ರವೇಶವಾಗುತ್ತಿದೆ. ಪಕ್ಕದ ಕೇರಳಲ್ಲಿ (Kerala) ಮುಂಗಾರು ಮಳೆ ಶುರುವಾಗಿದ್ದು, ಇಂದು ಬೆಂಗಳೂರಲ್ಲೂ ಮುಂಗಾರು ಶುರುವಾಗುವ ಎಚ್ಚರಿಕೆ ಸಿಕ್ಕಿದೆ. ಇದರ ಬೆನ್ನಲ್ಲೇ ಪಾಲಿಕೆ ಅಲರ್ಟ್ (Rain Alert) ಆಗಿದೆ.
ಬೆಂಗಳೂರಲ್ಲಿ ಈ ಬಾರಿ ಉತ್ತಮ ರೀತಿಯಲ್ಲಿ ಪೂರ್ವ ಮುಂಗಾರು ಮಳೆಯಾಗಿದೆ. ಹೀಗಾಗಿ ಮುಂಗಾರು ಕೂಡ ತೀವ್ರ ರೀತಿಯಲ್ಲಿ ಮಳೆಯಾಗುವ ಎಚ್ಚರಿಕೆಯನ್ನು ರಾಜ್ಯ ಹವಾಮಾನ ಇಲಾಖೆ ಕೊಟ್ಟಿದೆ. ಸದ್ಯ ಕೇರಳದಲ್ಲಿ ಮುಂಗಾರು ಪ್ರವೇಶ ಕಂಡಿದ್ದು, ಭಾರೀ ಮಳೆಯಾಗುತ್ತಿದೆ. ಜೂನ್ 2ರಿಂದ ಅಂದರೆ ಇಂದಿನಿಂದ ಬೆಂಗಳೂರಲ್ಲೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿಗೆ ಮುಂದಿನ 5 ದಿನಗಳ ಮಳೆಯ ಅಲರ್ಟ್ ನೀಡಲಾಗಿದೆ.
ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಪೂರ್ವ ಮುಂಗಾರು ತಗ್ಗಿದ್ದು, ಸರಾಸರಿ 30 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಮುಂಗಾರು ಪ್ರವೇಶದ ಮುನ್ಸೂಚನೆಯಾಗಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಜೊತೆಗೆ ಮಳೆಯಾಗಲಿದೆ. ಈ ಹಿನ್ನೆಲೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ತಂಪು ತಂಪು ಆಗಿದ್ದು, ಬೆಂಗಳೂರು ನಗರದಲ್ಲಿ ನಿನ್ನೆ 29.6 MM ಮಳೆ ದಾಖಲಾಗಿದೆ. HAL ಏಪೋರ್ಟ್ನಲ್ಲಿ 50.5MM ಮಳೆಯಾಗಿದ್ದು, ಬೆಂಗಳೂರು ಅರ್ಬನ್ 31.5 MM ಮಳೆಯಾಗಿದೆ.
ನಿನ್ನೆಯ ಮಳೆಗೆ ಹಲವು ಏರಿಯಾದ ರಸ್ತೆಗಳು ಜಲಾವೃತವಾಗಿದ್ದು, ಸರ್ಜಾಪುರ ,ಕೆಂಪಾಪುರದ ಮುಖ್ಯ ರಸ್ತೆಯಲ್ಲಿ ನೀರು ತುಂಬಿತ್ತು. ರಾಮಕೃಷ್ಣ ನಗರ, ಕನಕನಗರದಲ್ಲಿ, ಯಲಚೇನಹಳ್ಳಿ ಭಾಗದಲ್ಲಿ ಮನೆಗಳಿಗೆ ಮೋರಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಾರತಳ್ಳಿ, ಹೂಡಿ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ, ಪಣತ್ತೂರು ರೇಲ್ವೆ ಬ್ರಿಡ್ಜ್ ಬಳಿ ಮಳೆ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದರು.
ಇನ್ನು, ನಿನ್ನೆ ವರುಣನ ಅರ್ಭಟಕ್ಕೆ ನಗರದ ವಿವಿಧೆಡೆ 32 ಮರಗಳು ಧರೆಗೆ ಉರುಳಿದ್ದು, ಬಿಬಿಎಂಪಿ ಕಂಟ್ರೋಲ್ ರೂಮ್ನ ಹೆಲ್ಪ್ ಲೈನ್ಗೆ ದೂರಗಳು ಬಂದಿದೆ. ದೂರು ಬಂದ ಬೆನ್ನಲ್ಲೇ ಬಿಬಿಎಂಪಿ ಸಿಬ್ಬಂದಿಗಳು 18 ಕಡೆ ಮರ ತೆರವು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂಗಾರು ಮಳೆ ಎದುರಿಸಲು ಬಿಬಿಎಂಪಿ ರೆಡಿ?
ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳುವುದು ವಾಡಿಕೆ. ಆದರೆ ಪ್ರತಿ ಮಳೆಗಾಲಕ್ಕೂ ಬೆಂಗಳೂರಲ್ಲಿ ನೆರೆ ಅವಾಂತರ ಹಾಗೂ ಅನಾಹುತಗಳು ಕಟ್ಟಿಬುತ್ತಿ. ಈ ಬಾರಿಯೂ ಮಳೆಗೆ ಸಿದ್ದೆತೆ ಮಾಡಿಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಹೊಸ ಹೊಸ ಟೆಕ್ನಾಲಜಿಯ ಮೂಲಕ ನೆರೆ ತಡೆಗೆ ಮುಂದಾಗಿದೆ. ನೆರೆ ಸೂಕ್ಷ್ಮ ಪ್ರದೇಶಗಳನ್ನು ಹಾದು ಹೋಗುವ ರಾಜಕಾಲುವೆಗೆ ಸೆನ್ಸಾರ್ ಅಳವಡಿಕೆ ಮಾಡಿದೆ. ಹೂಳೆತ್ತುವ ಕೆಲಸವೂ ಪ್ರಗತಿಯಲ್ಲಿದೆ.
+ There are no comments
Add yours